Breaking News

ಯಲ್ಲಾಪುರ ತಾಲೂಕಿನ ಕೊಡಸೆಯಲ್ಲಿ ನಡೆದ ಕಣ್ಣಿನ ತಪಾಸಣೆ ಶಿಭಿರ ಅತ್ಯಂತ ಯಶಸ್ವಿ – ರವಿ ಕೈಟ್ಕರ್

ಪ್ರತಿಧ್ವನಿ ಯಲ್ಲಾಪುರ :ದೇಹದಲ್ಲಿ ಸರ್ವ ಅಂಗಗಳು ಪ್ರಾಮುಖ್ಯವೆ ಅದರಲ್ಲೂ ಕಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಜಗತ್ತನ್ನು ದರ್ಶಿಸುವುದು ಕಣ್ಣಿನಿಂದಲೆ ಅಂತಹ  ಕಣ್ಣಿನ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ ವಹಿಸಿ ಕಾಲಕಾಲಕ್ಕೆ ತಪಾಸಣೆಯೊಂದಿಗೆ ಹಾರೈಕೆ ಅತಿ ಮುಖ್ಯ ವಾಗಿದೆ ಇಂತಹ ಸಾರ್ಥಕ ಸೇವಾ ಈ ಭಾಗದ ಜನರಿಗೆ ಅನುಕೂಲ ಆಗಿದೆ,ಕಣ್ಣಿನ ಸಮಸ್ಯೆಗೆ ದೂರದ ಮಹಾನಗರ ಗಳಿಗೆ ತಲುಪುವುದು ಅಸಾಧ್ಯ ವಾಗಿತ್ತು ಊರಿನಲ್ಲಿ ಯೇ ಕಣ್ಣಿನ ತಪಾಸಣೆ ಮಾಡಿದ್ದಕ್ಕೆ ಸಂಘಟಕರಿಗೆ ಧನ್ಯವಾದ ಅರ್ಪಿಸುವೆ ಎಂದು ಯಲ್ಲಾಪುರ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಸ್ಥಳೀಯ ಪ್ರಮುಖ ಸಾಮಾಜಿಕ ಕಾರ್ಯಕರ್ತ ರವಿ ಕೈಟ್ಕರ್ ಸಭೆಯನುದ್ದೇಶಿಸಿ ಹೇಳಿದರು.

  ಅವರು ಬುಧವಾರ ತಾಲೂಕಿನ ಕೊಡಸೆಯಲ್ಲಿ ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ವಿದ್ಯಾ ಗಜಾನನೋತ್ಸವ ಸಮಿತಿ ಕೊಡಸೆ,ನಂದನ ಪ್ರಾಥಮಿಕ ಕ್ರಷಿ ಪತ್ತಿನ ಸೇವಾ ಸಹಕಾರಿ ಸಂಘ ಕಣ್ಣೀಗೇರಿ, ಗ್ರಾಂ ಪಂ ಕಣ್ಣೀಗೇರಿ,ಊರ ನಾಗರಿಕರು ಕೊಡಸೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯ ದಲ್ಲಿ  ಕೊಡಸೆಯ ವಿದ್ಯಾ ಗಜಾನನೋತ್ಸವ ಸಭಾ ಭವನದಲ್ಲಿ ನಡೆದ ಉಚಿತ ಕಣ್ಣು ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಸ್ಪಂದನ ಸೇವಾ ಸಂಸ್ಥೆಯ  ಗಣಪತಿ ಹೆಗಡೆ ಉದ್ಘಾಟಿಸಿದ ಸ್ಪಂದನ ಸೇವಾ ಟ್ರಸ್ಟ್ ನ ಗಣಪತಿ ಹೆಗಡೆ ಮಾತನಾಡಿ ಟ್ರಸ್ಟ್ ಉದ್ದೇಶ ಯಾರೂ ಕೂಡ ಕಣ್ಣಿನ ತೊಂದರೆ ಇಂದ ಬಳಲ ಬಾರದು ಎಂದು ತಿಳಿಸಿದರು. 

  ವಿ ಎಸ್ ಭಟ್ಟ ಕಲ್ಲೇಶ್ವರ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಉಚಿತವಾಗಿ ಕೊಡುವವರಿದ್ದರೂ ಅದನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವುದು ಅಷ್ಟೇ ಮುಖ್ಯ ಅದನ್ನು ಇಲ್ಲಿನ ಜನ ಮಾಡುತ್ತಿದ್ದಾರೆ,ಇವರ ಕಾರ್ಯ ಶ್ಲಾಘನೀಯ, ಒಳ್ಳೆಯ ದಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ ಸಂತೋಷ ರವರು ಬಂದ ಎಲ್ಲರಿಗೂ ಕಣ್ಣಿನ ತಪಾಸಣೆ ಮಾಡಿ ಸಲಹೆ ನೀಡಿದರು.ಊರ ಹಿರಿಯರಾದ ನರಸಿಂಹ ಹೆಗಡೆ, ಗಣಪತಿ ಗುಮ್ಮಾನಿ, ಮಂಜುನಾಥ ಪಾಟೀಲ,  ವಿ ಎಸ್ ಭಟ್ಟ ಕಲ್ಲೇಶ್ವರ ಉಪಸ್ಥಿತರಿದ್ದರು.     

ಪ್ರಶಾಂತ ಹೆಗ್ಗಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು,ಗಣಪತಿ ಗುಮ್ಮಾನಿ ಮತ್ತು ಮಂಜುನಾಥ ಹೆಗಡೆ ಕಾರ್ಯಕ್ರಮ ಸಂಯೋಜಿಸಿದ್ದರು. ಕೊಡಸೆ ಹಾಗೂ ಕನ್ನಡಗಲ್ ಬಾಗದ 150 ಕ್ಕೂ ಹೆಚ್ಚು ನಾಗರಿಕರು ಇದರ ಪ್ರಯೋಜನ ಪಡೆದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *