Breaking News

ಯಲ್ಲಾಪುರದಲ್ಲಿ 84 ಹಳ್ಳಿ ಸೂಕ್ಷ್ಮ ಪ್ರದೇಶ: ಶಿರಸಿಯಲ್ಲಿ ಸೆ.5 ರಂದು ಸಲ್ಲಿಸುವ ಆಕ್ಷೇಪ ಪತ್ರಕ್ಕೆ ಯಲ್ಲಾಪುರದಿಂದ ಸಂಪೂರ್ಣ ಬೆಂಬಲ : ರವೀಂದ್ರ ನಾಯ್ಕ್..


ಪ್ರತಿಧ್ವನಿ ಯಲ್ಲಾಪುರ : ಕಸ್ತೂರಿ ರಂಗನ್ 7 ನೇ ಅಧಿಸೂಚನೆ ಗೆ ಆಕ್ಷೇಪ ಪತ್ರ ಸಲ್ಲಿಸಲು ಯಲ್ಲಾಪುರದಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿಯಲ್ಲಿಆಕ್ಷೇಪ  ಪತ್ರ ಸಲ್ಲಿಸುವುದರೊಂದಿಗೆ ಹೋರಾಟಕ್ಕೆ ಬೆಂಬಲಿಸಲು ತೀರ್ಮಾನಿಸಲಾಯಿತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಸೋಮವಾರ ಪಟ್ಟಣದ ವೆಂಕಟರಮಣ ಸಭಾಂಗಣದಲ್ಲಿ ಜರುಗಿದ ಕಸ್ತೂರಿ ರಂಗನ್ ವಿರೋಧಿ ರ‍್ಯಾಲಿ ಪೂರ್ವಬಾವಿ ಸಭೆಯಲ್ಲಿನ ಮಾಹಿತಿ ಮಾದ್ಯಮಕ್ಕೆ ತಿಳಿಸಿದರು.


ಯಲ್ಲಾಪುರ ತಾಲೂಕಿನ ಕಣ್ಣೀಗೇರಿ, ಹಿತ್ಲಳ್ಳಿ, ಕುಂದರಗಿ, ನಂದೋಳ್ಳೀ, ಉಮ್ಮಚಗಿ,ಮಾವಿನಮನೆ, ಹಾಸಣಗಿ, ಆನಗೋಡ, ಮದ್ನೂರು, ಚಂದಗುಳಿ, ದೇಹಳ್ಳಿ, ಕಂಪ್ಲಿ, ವಜ್ರಳ್ಳಿ,
ಇಡಗುಂದಿ, ಕಿರವತ್ತಿ, ಯಲ್ಲಾಪುರ ಉಪಳೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ 84 ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ ಎಂದು ಅವರು ಹೇಳಿದರು.


ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆಯಂತೆ ಪರಿಸರ ಅತೀ ಸೂಕ್ಷ್ಮ ಪ್ರದೇಶ ನಿಗದಿಗೊಳಿಸುವ ಅಂಶವು ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ, ವರದಿ ಅನುಷ್ಟಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ
ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅಗ್ರಹಿಸಿದರು.
ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಈಗಾಗಲೇ ಸಾಕಷ್ಟು ಕಾನೂನು ನೀತಿ, ನಿಯಮ ಅಳವಡಿಸಲಾಗಿದ್ದು, ವಿನಾಕಾರಣ ಹೇಚ್ಚಿನ ಕಾನೂನಿನ ಬಲ ಪ್ರಯೋಗದ ಮೂಲಕ ನಿಯಂತ್ರಿಸಲು ಪ್ರಯತ್ನಿಸಿದ್ದಲ್ಲಿ ಜನಸಾಮಾನ್ಯರ ನೈಜ್ಯ ಜೀವನಕ್ಕೆ ಮಾರಕವಾಗುವುದೆಂದು ಹೇಳಿದರು.


ಸಭೆಯಲ್ಲಿತಾಲೂಕಾಧ್ಯಕ್ಷಭೀಮಸೀ ವಾಲ್ಮೀಕಿ, ಸಂಚಾಲಕರಾದ ಚಂದ್ರಶೇಖರ ಪೂಜಾರಿ, ರಾಘವೇಂದ್ರ ಕುಣಬಿ, ಅಣ್ಣಪ್ಪ ನಾಯ್ಕ ಕಣ್ಣೀಗೇರಿ ಪ್ರಶಾಂತ್ ಜೈನ ಅಟಬೈಲ್,ಸೀತಾರಾಮ ನಾಯ್ಕ ಕುಂದರಗಿ, ಸುಬ್ರಾಯ ಹೆಗಡೆ ಆನಗೋಡ, ವಿನೋದ್ ತಳೇಕರ ಹಾಸಣಗಿ, ಯೋಗೇಶ ನಾಯ್ಕ, ಅರವೀಸ್ ಫರ್ನಾಂಡಿಸ್ , ಬಸ್ತಾಂವ್ ಡಿಸೋಜಾ,ಶಿವರಾಮ ಆಚಾರಿ, ಸಹದೇವ ಗಾವಡಿ, ರಾಘವೇಂದ್ರ ಮರಾಠಿ, ಕೃಷ್ಣ ಕುಣಬಿ
ಮುಂತಾದವರು ಉಪಸ್ಥಿತರಿದ್ದರು.


ಮನೆ ಮನೆಯಿಂದ ಆಕ್ಷೇಪಣೆ:
ಕಸ್ತೂರಿ ರಂಗನ್ ವರದಿ ಆಕ್ಷೇಪ ಪತ್ರವನ್ನ ಮನೆ ಮನೆಯಿಂದ ಕೇಂದ್ರ ಪರಿಸರ ಇಲಾಖೆಗೆ
ಸಲ್ಲಿಸುವಂತೆ ಹೋರಾಟಗಾರರ ವೇದಿಕೆ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ವಟಗೇರಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *