
ಪ್ರತಿಧ್ವನಿ ಯಲ್ಲಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಗೆ 7 ನೇ ಅಧಿಸೂಚನೆ ಆಗಿರುವ ಹಿನ್ನಲೆಯಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಘೋಷಿಸಲ್ಟಟ್ಟ ಸೂಕ್ಷ್ಮ ಪ್ರದೇಶದ ಪಟ್ಟಿಯ ಬಿಡುಗಡೆ ಮತ್ತು ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲು ಅಗಸ್ಟ 24 ರ ಸೋಮವಾರ, ಮುಂಜಾನೆ 10 ಗಂಟೆಗೆ ಸ್ಥಳೀಯ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ಮಂಚಿಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಅಸ್ತಿತ್ವಕ್ಕಾಗಿ ಹಗಲಿರುಳು ಶ್ರಮಿಸುತ್ತಾ ಅರಣ್ಯ ವಾಸಿಗಳ ಮನೆಯ ಮಗನಾಗಿ ನಿಸ್ವಾರ್ಥ ಭಾವದಲ್ಲಿ ಹೋರಾಟಮಾಡುತ್ತ ನೊಂದವರ ಧ್ವನಿಯಾಗಿ ಹೋರಾಟದ ಕಿಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ಸಭೆಯಲ್ಲಿ ಉಪಸ್ಥಿತರಿರುವವರು.

ಜುಲೈ 27 ರಂದು ಕಸ್ತೂರಿ ರಂಗನ್ ಸೂಕ್ಷ್ಮ ಪ್ರದೇಶದ 7 ನೇ ಅಧಿಸೂಚನೆ ಆಗಿರುವ ಹಿನ್ನಲೆಯಲ್ಲಿ ಮಹತ್ವ ಪೂರ್ಣ ಸಭೆಗೆ ಆಸಕ್ತರು ಆಗಮಿಸಿ ಮುಂದಿನ ಹೋರಾಟದ ರೂರು ರೇಷೆಗೆ ಸಲಹೆ ಸೂಚನೆ ಕೊಡಲು ಅವರು ಕೋರಿದ್ದಾರೆ.









Prathidvani Yellapura