
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಳಪೆಯಾಗಿದ್ದು ಇತ್ತೀಚೆಗೆ ವಿಪರೀತ ಹೊಂಡಗುಂಡಿಗಳಿಂದ ಅಪಾಯಕಾರಿಯಾಗಿ ಪರಿಣಮಿಸಿದ್ದು ಬಲಿಗಾಗಿ ಬಾಯ್ತೆರೆದು ಕಾದಂತಿದೆ.

ಬಹುತೇಕ ಮಾದ್ಯಮಗಳಲ್ಲಿ ಈ ಸಮಸ್ಯೆ ಬಹಳಷ್ಟುಬಾರಿ ಬಂದಿರುವುದನ್ನು ಗಮನಿಸಿದ್ದೇನೆ ಆದರು ದುರಸ್ತಿ ಮಾಡದಿರುವುದು ದುರಂತವಾಗಿದೆ. ನಮ್ಮ ತೆರಿಗೆ ಹಣ ಸಮರ್ಪಕವಾಗಿ ಬಳಸಿ ಮೂಲಭೂತ ಸೌಕರ್ಯಗಳ ಒದಗಿಸಿ ಇಲ್ಲವಾದರೆ ತೆರಿಗೆ ಹಣ ನಮಗೆ ಕೊಡಿ ನಮ್ಮ ವ್ಯವಸ್ಥೆ ನಾವೆ ಮಾಡಿಕೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ಅಹಿಂದ ದ್ಯಾಮಣ್ಣ ಬೋವಿ ವಡ್ಡರ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಹೆದ್ದಾರಿ ಬಹುತೇಕ ಕಡೆಯಲ್ಲಿ ಪ್ರಾಣಕಂಟಕ ಗುಂಡಿಗಳಿದ್ದು ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ ಅಲ್ಲದೆ ಗುಂಡಿ ತಪ್ಪಿಸುವ ಭರದಲ್ಲಿ ಅದೆಷ್ಟೋ ಅಪಘಾತಗಳಾಗುತ್ತಿದ್ದು ಇದಕ್ಕೆ ಹೆದ್ದಾರಿ ನಿರ್ವಹಣೆ ನೇರ ಜವಾಬ್ದಾರರಾಗಲಿದ್ದಾರೆ.

ರಸ್ತೆ ಸುರಕ್ಷತೆ ಮತ್ತು ಸಂಚಾರಕ್ಕೆ ಸಂಬಂಧಿಸಿದಂತೆ ರಸ್ತೆಗಳಲ್ಲಿನ ಹೊಂಡಗುಂಡಿಗಳಿಂದ ಅಪಘಾತ ಸಂಭವಿಸಿ ಆಗುವ ಹಾನಿಗೆ ಸಂಬಂಧಿಸಿದ ಇಲಾಖೆ,ಗುತ್ತಿಗೆದಾರ,ಏಜೆನ್ಸಿ ನೇರ ಹೊಣೆಯಾಗಲಿದ್ದು ಆರ್.ಎಂ.ಎ ಕಾಯ್ದೆ ಅನ್ವಯ 198 (ಎ) ಮೊಟಾರು ವಾಹನ ಕಾಯ್ದೆ 1988 ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದ್ದು ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಅಹಿಂದ ವೇದಿಕೆ ಅಡಿಯಲ್ಲಿ ಹೆದ್ದಾರಿಯಲ್ಲಿ ವನಮಹೋತ್ಸವ ಆಚರಿಸಿ ಪ್ರತಿಭಟಿಸಲಾಗುವುದು ಮತ್ತು ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
Prathidvani Yellapura