

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಜೂನ್ ತಿಂಗಳಿನ ಅರ್ಧ ಭಾಗ ಕಳೆದು; ಈವರೆಗೂ ಮಳೆಗಾಲ ಆರಂಭವಾಗದೇ; ಮುಂಗಾರಿನ ಮುನ್ಸೂಚನೆಯೂ ಕಾಣಿಸದೇ ರೈತರು ಹಾಗೂ ಜನರು ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ತಾಪ ಮತ್ತು ಕೃಷಿ ಕಾರ್ಯಗಳ ಹಿನ್ನಡೆಯಿಂದ ತೀವ್ರ ಆತಂಕಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಗಡಿ ಭಾಗದ ಉಚಗೇರಿಯ ಕದಳಿ ನಂದಿಕೇಶ್ವರ ದೇವಸ್ಥಾನದಲ್ಲಿ ಸೋಮವಾರ ರುದ್ರಾಭಿಷೇಕ ಹಾಗೂ ಪರ್ಜನ್ಯ ಮತ್ತಿತರ ದೇವತಾ ಕಾರ್ಯಕ್ರಮಗಳು ನಡೆದವು

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಧನಂಜಯ ಹೆಗಡೆ ನೇತೃತ್ವದಲ್ಲಿ ವೈದಿಕರಾದ ವಿಘ್ನೇಶ್ವರ ಭಟ್ಟ ಕನೇನಹಳ್ಳಿ ದೇವತಾ ಪೂಜೆಯನ್ನು ನೆರವೇರಿಸಿದರು. ಸ್ಥಳೀಯರಾದ ಮಂಜುನಾಥ ಶಾಸ್ತಿç, ಕೃಷ್ಣ ಹೆಗಡೆ, ದತ್ತಾತ್ರೇಯ ಹೆಗಡೆ, ಶುಭಾಂಗ ಹೆಗಡೆ, ಚಿನ್ಮಯ ಹೆಗಡೆ, ಶಾಂತಾರಾಮ ಹೆಗಡೆ, ಸೋಮನಾಥ ಜೋಷಿ, ಎನ್.ಆರ್.ಹೆಗಡೆ, ಗಣಪತಿ ಹೆಗಡೆ, ನಾರಾಯಣ ಹೆಗಡೆ, ನಾರಾಯಣ ನಾಯ್ಕ, ಭಾಸ್ಕರ ನಾಯ್ಕ ಮತ್ತು ಉಚಗೇರಿ, ಚಿಪಗೇರಿ, ಜಕ್ಕೋಳ್ಳಿ ಹಾಗೂ ಸವಣೆ ಗ್ರಾಮಗಳ ಸಾರ್ವಜನಿಕ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Prathidvani Yellapura