

ಯಲ್ಲಾಪುರ ; ತಾಲೂಕಿನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಭಾನುವಾರ ತುರುಸಿನ ಚುನಾವಣೆ ನಡೆಯಿತು.

ರಾಜ್ಯ ವಿಧಾನಸಭಾ ಚುನಾವಣೆಗಿಂತಲು ಹೆಚ್ಚು ಕುತೂಹಲ ಕೆರಳಿಸಿದ ಆನಗೋಡು ಸೊಸೈಟಿ ಚುನಾವಣೆಗೆ ಹಿಂದಿನ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿಕುಂಬ್ರಿ ತಂಡ ಹಾಗೂ ಗಣಪತಿ ಭಟ್ಟ ಕರುಮನೆ ತಂಡದ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಇದೆ.
ಸಾಲಗಾರ ಕ್ಷೇತ್ರದ 947 ಮತದಾರರು, ಹಾಗೂ ಸಾಲಗಾರರಲ್ಲದ ಕ್ಷೇತ್ರದ 150 ಮತದಾರರು ಸೇರಿ ಒಟ್ಟೂ 1097 ಮತದಾರರು ಮತ್ತು ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದೇ ನ್ಯಾಯಾಲಯದ ಮೊರೆಹೋಗಿ ಆದೇಶವಾಗಿ ಪಡೆದ ಮತದಾನದ ಹಕ್ಕಿನ 223 ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಮತಗಟ್ಟೆ ಅಧಿಕಾರಿ ಸುನೀಲ ತೇಲಕರ್ ನೇತ್ರತ್ವದಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತ ರೀತಿಯಿಂದ ಚುನಾವಣೆ ನಡೆದಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಚುನಾವಣ ಪ್ರಕ್ರಿಯೆಗೆ ಸಹಕರಿಸಲು ಪೊಲೀಸರು ಭದ್ರತೆ ಕಲ್ಪಿಸಿದ್ದರು. ಉಚ್ಚ ನ್ಯಾಯಾಲಯದ ಆದೇಶದಂತೆ ಜೂನ್ 26 ರಂದು ಮತ ಎಣಿಕೆ ನಡೆಯಲಿದೆ.

Prathidvani Yellapura