
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ ಪರ ಆಡಳಿತ ನೀಡಿ ಜನ ಮಾನಸದಲ್ಲಿ ನೆಮ್ಮದಿಯ ವಾತವರಣ ಮೂಡಿಸಿದ ರಾಷ್ಟ್ರ ಭಕ್ತ ಬಿಜೆಪಿ ಆಡಳಿತ ರಾಜ್ಯದಲ್ಲಿ ಮತ್ತೊಮ್ಮೆ ಕಾಣಲಿದ್ದೇವೆ. ವಿಶೇಷವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಾಮಾನ್ಯರ ನಾಯಕರೆಂದೇ ಹೆಸರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಲಿದ್ದಾರೆ.ಜೊತೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಪ್ರಮೋದ್ ಹೆಗಡೆ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿ ಯಲ್ಲಿ ಹೇಳಿದರು.

ಪ್ರಜ್ಞಾವಂತರು ಮತ್ತು ಮತದಾರರು ನಮ್ಮ ಪ್ರನಾಣಳಿಕೆಯ ಅಂಶಗಳನ್ನು ಮೆಚ್ಚಿದ್ದು ರಾಜ್ಯದ ಅಭಿವೃದ್ಧಿ ಗೆ ಪೂರಕವಾಗಿರುವುದಾಗಿ ಮತದಾರ ಪ್ರಶಂಸಿಸಿದ್ದಾನೆ ಜನಪರ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು ಶ್ರೀಸಾಮಾನ್ಯರಿಗೆ ಒಪ್ಪಿತವಾಗಿದೆ. ಪ್ರಧಾನಿ ಮೋದಿಯವರ ರಾಜ್ಯ ಚುನಾವಣಾ ಪ್ರವಾಸದಿಂದ ಮೂವತ್ತಕ್ಕು ಅಧಿಕ ಸಂಖ್ಯೆಯ ಸೀಟುಗಳು ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ನಗರ ಘಟಕದ ಪ್ರಮುಖ ರಾಮು ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಡಾ,ರವಿಭಟ್ ಬರಗದ್ದೆ, ಪ್ರಸಾದ್ ಹೆಗಡೆ ಉಪಸ್ಥಿತರಿದ್ದರು.
Prathidvani Yellapura