ಪ್ರತಿಧ್ವನಿ,ಯಲ್ಲಾಪುರ: ಬೆಂಗಳೂರಿನ ಗೀತಾ ಪರಿವಾರವು ನಾಲ್ಕು ವಿಭಾಗಗಳಲ್ಲಿ ನೆಡೆಸುವ ಭಗವದ್ಗೀತಾ ಆನ್ ಲೈನ ಪರೀಕ್ಷೆಯಲ್ಲಿ ತಾಲೂಕಿನ ಆನಗೋಡು ಅಗ್ಗಾಸಿಮನೆಯ ನೇತ್ರಾವತಿ ಕ್ರಷ್ಣ ಭಟ್ಟ ಗೀತಾ ಇವರು ೬೦೦ ಅಂಕಕ್ಕೆ ೫೯೮ ಅಂಕ ಪಡೆದು ಬಂಗಾರದ ಪದಕ ಪಡೆದಿದ್ದಾರೆ.

ಇವರ ಸಾಧನೆಗೆ ಶ್ರೀಮಾತಾ ವಿವಿಧೋದ್ದೇಶಗಳ ಸೌಹರ್ದ ಸಹಕಾರಿ ಸಂಘದ ಅದ್ಯಕ್ಷ ಜಿ ಎನ್ ಹೆಗಡೆ ಹಿರೆಸರ, ಉಪಾಧ್ಯಕ್ಷ ಎಸ್ ಎಸ್ ಭಟ್ಟ ಅಖಿಲಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷ ಶಶೀಭೂಷಣ ಹೆಗಡೆ ನಿರ್ಧೇಶಕ ಶ್ರೀಪಾದ ರೈಸದ, ಶ್ರೀಪಾದ, ಕೆ ಎಸ್ ಭಟ್ಟ ಆನಗೋಡ, ಪ್ರಸಾದ ಹೆಗಡೆ, ನಾರಾಯಣ ಭಟ್ಟ ಕರಿಕಲ್,ಗಣೇಶ ಹೊನ್ನಾವರ ಶುಭ ಹಾರೈಸಿದ್ದಾರೆ.



Prathidvani Yellapura