
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಕಂಪ್ಲಿ ಪಂಚಾಯತ ವ್ಯಾಪ್ತಿಯ ಕೆರೆಹೊಸಳ್ಳಿ ಗ್ರಾಮದಲ್ಲಿ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿ ಮಂಡಳಿ ಏ.16ರಂದು ಅಸ್ತಿತ್ವಕ್ಕೆ ಬಂದಿತು.

ದಲಿತ ಪರ ಹೋರಾಟಕ್ಕೆ , ಸಮಾಜದಲ್ಲಿ ತುಳಿತಕ್ಕೊಳಗಾದವರ ಸಹಾಯಕ್ಕೆ ಧಾವಿಸಲು ಸಮಿತಿ ಕಟಿಬದ್ಧವಾಗಿದ್ದು ನೂತನ ಪದಾಧಿಕಾರಿ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಜಿಲ್ಲಾ ಸಂಘಟನೆಯ ಸಂಚಾಲಕ ಕಲ್ಲಪ್ಪ ಹೋಳಿ ಹೇಳಿದರು.

ಅಧ್ಯಕ್ಷರಾಗಿ ಸುರೇಶ ಅನಂತ ಸಿದ್ದಿ, ಉಪಾಧ್ಯಕ್ಷರಾಗಿ ಉಮೇಶ ಜಿ ಸಿದ್ದಿ, ಮಾದೇವ ಜಿ ಸಿದ್ದಿ, ಮಹಿಳಾ ವಿಭಾಗದಲ್ಲಿ ನಾಗರತ್ನ ಎಂ ಸಿದ್ದಿ, ಕಾರ್ಯದರ್ಶಿ ಚಂದ್ರಶೇಖರ ಜಿ ಸಿದ್ದಿ, ಖಜಾಂಚಿಯಾಗಿ ನಾಗೇಶ ಕೃಷ್ಣ ಕುಣಬಿ, ಸಂಚಾಲಕರಾಗಿ ರಾಮಚಂದ್ರ ಜಾನು ಕುಣಬಿ ಹಾಗೂ 29 ಮಂದಿ ಸದಸ್ಯರನ್ನೊಳಗೊಂಡ ನೂತನ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ರಾಜ್ಯ ಸಂಘಟನೆಯ ಸಂಚಾಲಕ ಎಸ್ ಫಕೀರಪ್ಪ ನೇತೃತ್ವದಲ್ಲಿ ಪದಗ್ರಹಣ ಸಮಾರಂಭ ಕೆರೆಹೊಸಳ್ಳಿಯ ಶಾಲಾ ಆವರಣದಲ್ಲಿ ನಡೆದಿದ್ದು ಜಿಲ್ಲಾಧ್ಯಕ್ಷ ಗೋಪಾಲ ನಡುಕಿನಮನೆ, ತಾಲೂಕಾಧ್ಯಕ್ಷ ಶೇಖರ ಸಿದ್ದಿ, ಮುಂಡಗೋಡ ಅಧ್ಯಕ್ಷ ಜ್ಯೂಜೆ ಸಿದ್ದಿ ಹಾಗೂ ಪ್ರಮುಖರಾದ ಅಜಿತ್ ಕಾಂಬ್ಳೆ, ಮಹಾಂತೇಶ ಹರಿಜನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.




Prathidvani Yellapura