
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಶಿವಮೊಗ್ಗದಲ್ಲಿ ನಡೆದ ೨೬ನೇ ರಾಜ್ಯಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ಸ್ 2024- 25ನೇ ಸಾಲಿನ ಕ್ರೀಡಾಕೂಟದಲ್ಲಿ, ಯಲ್ಲಾಪುರ ಮೂಲದ ಹಾಲಿ ಮೂಡಬಿದರೆ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಒಂದನೇ ವರ್ಷದ ವಿದ್ಯಾರ್ಥಿ ನಿರೀಕ್ಷಿತ ಸಂತೋಷ್ ನಾಯಕ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಹೆತ್ತವರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ.

ಈತ ಮೂಲತಃ ಯಲ್ಲಾಪುರದ ನಿವಾಸಿಯಾಗಿದ್ದು, ಶಿಕ್ಷಕ ದಂಪತಿಗಳಾದ ವೀಣಾ ಮತ್ತು ಸಂತೋಷ್ ನಾಯಕ್ರವರ ಪುತ್ರನಾಗಿರುತ್ತಾನೆ. ಇವನು ಯಲ್ಲಾಪುರದ ವೈ.ಟಿ.ಎಸ್.ಎಸ್ ಹಾಗೂ ವಿಶ್ವದರ್ಶನ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, 2023 -24 ನೇ ಸಾಲಿನಲ್ಲಿ ಕೂಡ ಚಕ್ರ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾನೆ.

ಇವನ ಸಾಧನೆಗೆ ಸಹೋದರಿಯರು ತಂದೆ ತಾಯಿಯರು, ಗುರು ಹಿರಿಯರು, ಸ್ನೇಹಿತರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.



Prathidvani Yellapura