


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪುಟ್ಟಪರ್ತಿ ಸಾಯಿಬಾಬಾರವರ ಅನುಗ್ರಹ ಮತ್ತು ಪ್ರೇರಣೆಯಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯಲ್ಲಾಪುರ ತಾಲೂಕಿನ ಸಾಯಿ ಭಕ್ತರ ತಂಡವೊಂದು ತಾಲೂಕಿನ ಮದನೂರು ಗ್ರಾಮದ ತಾವರೆಕಟ್ಟಾ ಮತ್ತು ಹುಣಶೆಟ್ಟಿಕೊಪ್ಪದ ಕೆರೆಗಳ ಹೂಳೆತ್ತುವ ಮೂಲಕ ಹತ್ತಾರು ಎಕರೆ ಪ್ರದೇಶಕ್ಕೆ ನೀರೊದಗಿಸಿ ಜಾನುವಾರುಗಳಿಗೆ ದಣಿವಾರಿಸುವ ಸಾರ್ಥಕ ಕಾರ್ಯ ಕೈಗೊಂಡಿದ್ದಾರೆ.

ಶ್ರೀ ಸತ್ಯಸಾಯಿ ಸೇವಾ ಸಮಿತಿಹಾಗೂ ಭಜನಾ ಮಂಡಳಿಯ ವತಿಯಿಂದ ಯಲ್ಲಾಪುರ ಮಾತ್ರವಲ್ಲದೇ ಹಳಿಯಾಳ ತಾಲೂಕಿನ ಕುಂಬಾರಕೊಪ್ಪ, ಬಸವಳ್ಳಿ, ಮಲವಡಿ, ಚಿಬ್ಬಲಗೇರಿ, ತಿಮ್ಮಾಪುರ, ಗರಡೊಳ್ಳಿ ಕೆರೆಗಳಲ್ಲೂ ಸಹ ಹೂಳೆತ್ತುವ ಕಾರ್ಯವಾಗಿದೆ. ಪ್ರತಿಕೆರೆಯ ಸುತ್ತಮುತ್ತ ಹತ್ತಾರು ಎಕರೆ ಪ್ರದೇಶ ಭೂಮಿಗೆ ನೀರೊದಗಿಸುವುದಲ್ಲದೇ ಜಾನುವಾರುಗಳ ದಣಿವಾರಿಸುವ ಕಾರ್ಯವಾಗುತ್ತಿದೆ.

ಕೇವಲ ಸರ್ಕಾರವೇ ಮಾಡಬೇಕೆಂಬ ಮಾತಿಗೆ ತದ್ವಿರುದ್ಧವಾಗಿ ಪುಟ್ಟಪರ್ತಿ ಸಾಯಿಬಾಬಾರಂತೆ ಸಮಾಜಸೇವೆಯ ಮೂಲಕ ಸಾಯಿ ಅನುಗ್ರಹಕ್ಕೆ ಪಾತ್ರರಾಗುವ ಕಾರ್ಯವನ್ನು ಮಾಡುವುದರಲ್ಲಿ ಅತ್ಯಂತ ಆತ್ಮತೃಪ್ತಿ ಇದೆ ಎನ್ನುತ್ತಾರೆ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪ್ರಮುಖ ಬೈರು ಜೋರೆ.
ಸಾಯಿಭಕ್ತರ ಈ ಸಮಾಜುಮುಖಿ ಕಾರ್ಯಕ್ಕೆ ಗ್ರಾಮಸ್ಥರು, ಸಾರ್ವಜನಿಕರು ಪ್ರಶಂಶಿಸಿದ್ದಾರೆ.
Prathidvani Yellapura