

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಮೊದಲು ಎಲ್ಲರನ್ನೂ ಪ್ರೀತಿಸುವ ಮನುಷ್ಯರಾಗಿ, ತಾಯಿ ಭಾಷೆಯನ್ನು ಪ್ರೀತಿಸಿ, ಕನ್ನಡವನ್ನು ಗೌರವಿಸಿ. ಸಾಗರಾದಾಚೆಯೂ ಕಸಾಪ ತನ್ನ ಸಂಘಟನೆ ಆರಂಭಿಸುವ ಮೂಲಕ ವಿದೇಶ ನೆಲಕ್ಕೂ ಕಾಲಿಟ್ಟಿದೆ ‘ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಾಡು, ನುಡಿಯ ಸಂಘಟನೆಗಳಿದ್ದರೂ. ಶತಮಾನದಿಂದ ನಾಡು ನುಡಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು, ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಎದೆಗುಂದದೇ ನೇರವಾಗಿ ಹೋರಾಟ ನಡೆಸಿದ ಸಾಧನೆ ಕನ್ನಡ ಸಾಹಿತ್ಯ ಪರಷತ್ತಿನದ್ದು ಮಾತ್ರ’ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಹಮ್ಮಿಕೊಂಡ ನಿವೇದನಾ ಒಡಂಬಡಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಸಾಪ ಅಧ್ಯಕ್ಷ ಬಿ,ಎನ್.ವಾಸರೆ ಹಾಗೂ ಪ್ರಾಂಶುಪಾಲ ಡಿ.ಎಸ್.ಭಟ್ಟ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ವರ್ಷವಿಡೀ ಕನ್ನಡದ ಕಾರ್ಯಕ್ರಮ ಹಮ್ಮಿಕೊಳ್ಳುವ, ಅದಕ್ಕೆ ಸಹಕಾರ ನೀಡುವ ನಿವೇದನಾ ಒಡಂಬಡಿಕೆಯನ್ನು ಹಸ್ತಾಂತರಿಸಿಕೊಂಡರು.
ಒಡಂಬಡಕೆ ನಿರೂಪಿಸಿದ ಉಪನ್ಯಾಸಕಿ ಸವಿತಾ ನಾಯಕ ಮಾತನಾಡಿ, ಸಾಹಿತ್ಯ ಸಂವೇದನೆ, ಕನ್ನಡ, ಸಾಹಿತ್ಯಿಕ ಕಾರ್ಯಕ್ರಮ, ಭಾಷಾಂತರ, ಪತ್ರಿಕೋದ್ಯಮ, ತಾಂತ್ರಿಕ, ಸ್ಪರ್ಧಾತ್ಮಕ ಪರೀಕ್ಷೆ ಇವುಗಳಲ್ಲಿ ಕನ್ನಡದ ಬಳಕೆಯ ಕುರಿತು ಉತ್ತೇಜನ ಮುಂತಾದ ೭ ವಿಷಯಗಳನ್ನು ಒಳಗೊಂಡಿದೆ ಎಂದರು.

‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಕೌಶಲ್ಯ’ ಕುರಿತು ಅಂಕೋಲಾ ಶ್ರೀ ರಾಮ ಸ್ಟಡಿ ಸರ್ಕಲ್ ನಿರ್ದೇಶಕ, ವಕೀಲ ಸೂರಜ ನಾಯ್ಕ ಉಪನ್ಯಾಸ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಹಾಗೂ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಮಾತನಾಡಿದರು, ಪ್ರಾಂಶುಪಾಲ ಡಿ.ಎಸ್.ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ನಮೃತಾ ಹೆಬ್ಬಾರ್ ಪ್ರಾರ್ಥಿಸಿದರು, ಉಪನ್ಯಾಸಕ ರಾಮಕೃಷ್ಣ ಗೌಡ ಸ್ವಾಗತಿಸಿ, ವಂದಿಸಿದರು, ಆಶಾ ಬೆಳ್ಳೆನವರ್ ನಿರೂಪಿಸಿದರು.





Prathidvani Yellapura