

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಸರ್ಕಾರಿ ಹಿರಿಯ ಪ್ರಾಥಮಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಆಸರೆ ಬಿಡದಿ ಬಾಲ್ಯದ ಗೆಳೆಯರ ಬಳಗ ರಾಮನಗರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೆರಿ ಗೌಳಿವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕಲಾಕೌಶಲ್ಯ ಮತ್ತು ಕಾಗದ ಕತ್ತರಿ ಕಲೆಯ ನಾವಿನ್ಯತೆ ಚಟುವಟಿಕೆಯ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.

ಕಾರ್ಯಗಾರವನ್ನು ವಿಶ್ವನಾಥ ಮರಾಠಿ ಅವರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಮೈಸೂರಿನ ಕಲಾವಿದರಾದ ಮೈಸೂರು ಹುಸೇನಿ ಎಂದೆ ಚಿರ ಪರಿಚಿತರಾಗಿರುವ ಎಸ್ ಎಫ್ ಹುಸೇನಿಯವರು ಉದ್ಘಾಟಿಸಿದರು.

ಬೆಳಗ್ಗಿನ ಅವಧಿಯಲ್ಲಿ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಕಲಾಕೌಶಲ್ಯ ತರಬೇತಿ ಕಾರ್ಯಗಾರವನ್ನು ಮತ್ತು ಮಧ್ಯಾಹ್ನದ ಅವಧಿಯಲ್ಲಿ ನಾಲ್ಕರಿಂದ ಏಳನೇ ತರಗತಿಯ ವರೆಗಿನ ಮಕ್ಕಳಿಗೆ ಕಾಗದ ಕತ್ತರಿ ಕಲೆಯ (ಸಾಂಜಿ) ಕಾರ್ಯಗಾರವನ್ನು ಶ್ರುಯಕತರು ನಡೆಸಿಕೊಟ್ಟರು.


ವಿಶಿಷ್ಟ ಬಗೆಯ ಕಾಗದ ಭಿತ್ತಿ ಶಿಲ್ಪಗಳು ,ಏಕ ರೇಖಾ ಚಿತ್ರಗಳು, ಪ್ರಯೋಗಾತ್ಮಕ ಅಮುರ್ತ ಛಾಯಾ ಚಿತ್ರಗಳು ಇವರ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ
ಇವರು ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಸರಕಾರಿ ಶಾಲೆಗಳಿಗೆ ತೆರಳಿ ತಮ್ಮ ಕಲೆಯ ಕಾರ್ಯಾಗಾರವನ್ನು ಉಚಿತವಾಗಿ ನಡೆಸುತ್ತಾ ಕಲಾ ಸೇವೆಯನ್ನು ಮಾಡುತ್ತ ಮಕ್ಕಳಲ್ಲಿ ಪಠ್ಯದ ಜೊತೆಗೆ ಸೃಜನಶೀಲ ಕಲಾ ಚಟುವಟಿಕೆಯನ್ನು ಮಾಡುತ್ತಿರುವುದು ಶ್ಲಾಘನೀಯ ವಾಗಿದೆ.

ಅನೇಕ ಕಲಾಕೃತಿಗಳು ಫಿಲಂಡ್, ಜರ್ಮನ್ ,ಸೌತ್ ಆಫ್ರಿಕಾ, ದೋಹ, ದೇಶಗಳ ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹ ಗೊಂಡಿದೆ
ಕಾರ್ಯಗಾರದ ನಡುವೆ ಶಿಕ್ಷಣ ಸಂಯೋಜಕರಾದ ಶ್ರೀ ಪ್ರಶಾಂತ್ ಜಿಎನ್ ಸರ್ ರವರು ತರಬೇತಿಯ ಮಧ್ಯಾಹ್ನದ ಅವಧಿಗೆ ಆಗಮಿಸಿ ಕಾರ್ಯಗಾರ ವೀಕ್ಷಿಸಿ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಇಂತಹ ನಾವಿನ್ಯಯೂತ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶ್ಲಾಘನೆ ಮಾಡಿದರು.

ಕಾರ್ಯಗಾರದ ಸಂದರ್ಭದಲ್ಲಿ ಸಿ ಆರ್ ಪಿ ಗಳಾದ ಶ್ರೀ ಸಂತೋಷ್ ನಾಯಕ್,ಬಿ ಐ ಆರ್ ಟಿ ಶಾಹಿನ್ ಶೇಖ್,ಪ್ರಥಮ ಪೌಂಡೇಶನ್ ಜಿಲ್ಲಾ ನೋಡಲ್ ಅಧಿಕಾರಿ ಗಳಾಗಿರುವ ಶ್ರೀ ಅಶೋಕ್ ನಾಯಕ್ ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಲಮಾಣಿ ಅವರು ಸರ್ವರನ್ನು ಸ್ವಾಗತಿಸಿದರು ,ಶಿಕ್ಷಕ ಆದರ್ಶ ಜಿ ಟಿ ಕಾರ್ಯಕ್ರಮ ನಿರ್ವಹಿಸಿದರು ಶಾಲಾ ಮಕ್ಕಳು ಪ್ರಾರ್ಥಿಸಿದರು ಶಿಕ್ಷಕಿರಾದ ಶೋಭಾ ಗುನಗಿ ವಾಣಿ ನಾಯ್ಕ್, ಉಪಸ್ಥಿತರಿದ್ದರು ಮಕ್ಕಳೆಲ್ಲ ಸಂತೋಷದಿಂದ ಭಾಗವಹಿಸಿದ್ದರು.
