Breaking News

“ಕಲಾಕೌಶಲ್ಯ ಮತ್ತು ಜಾನಪದ ” ಕಾಗದದಲ್ಲಿ ಕತ್ತರಿ ಕಲೆಯ ನಾವಿನ್ಯತೆ ಚಟುವಟಿಕೆಯ ಕಾರ್ಯಗಾರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

‌‌ ಪ್ರತಿಧ್ವನಿ ಯಲ್ಲಾಪುರ – ಸರ್ಕಾರಿ ಹಿರಿಯ ಪ್ರಾಥಮಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಆಸರೆ ಬಿಡದಿ ಬಾಲ್ಯದ ಗೆಳೆಯರ ಬಳಗ ರಾಮನಗರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೆರಿ ಗೌಳಿವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕಲಾಕೌಶಲ್ಯ ಮತ್ತು ಕಾಗದ ಕತ್ತರಿ ಕಲೆಯ ನಾವಿನ್ಯತೆ ಚಟುವಟಿಕೆಯ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.


ಕಾರ್ಯಗಾರವನ್ನು ವಿಶ್ವನಾಥ ಮರಾಠಿ ಅವರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಮೈಸೂರಿನ ಕಲಾವಿದರಾದ ಮೈಸೂರು ಹುಸೇನಿ ಎಂದೆ ಚಿರ ಪರಿಚಿತರಾಗಿರುವ ಎಸ್ ಎಫ್ ಹುಸೇನಿಯವರು ಉದ್ಘಾಟಿಸಿದರು.


ಬೆಳಗ್ಗಿನ ಅವಧಿಯಲ್ಲಿ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಕಲಾಕೌಶಲ್ಯ ತರಬೇತಿ ಕಾರ್ಯಗಾರವನ್ನು ಮತ್ತು ಮಧ್ಯಾಹ್ನದ ಅವಧಿಯಲ್ಲಿ ನಾಲ್ಕರಿಂದ ಏಳನೇ ತರಗತಿಯ ವರೆಗಿನ ಮಕ್ಕಳಿಗೆ ಕಾಗದ ಕತ್ತರಿ ಕಲೆಯ (ಸಾಂಜಿ) ಕಾರ್ಯಗಾರವನ್ನು ಶ್ರುಯಕತರು ನಡೆಸಿಕೊಟ್ಟರು.


ವಿಶಿಷ್ಟ ಬಗೆಯ ಕಾಗದ ಭಿತ್ತಿ ಶಿಲ್ಪಗಳು ,ಏಕ ರೇಖಾ ಚಿತ್ರಗಳು, ಪ್ರಯೋಗಾತ್ಮಕ ಅಮುರ್ತ ಛಾಯಾ ಚಿತ್ರಗಳು ಇವರ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ
ಇವರು ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಸರಕಾರಿ ಶಾಲೆಗಳಿಗೆ ತೆರಳಿ ತಮ್ಮ ಕಲೆಯ ಕಾರ್ಯಾಗಾರವನ್ನು ಉಚಿತವಾಗಿ ನಡೆಸುತ್ತಾ ಕಲಾ ಸೇವೆಯನ್ನು ಮಾಡುತ್ತ ಮಕ್ಕಳಲ್ಲಿ ಪಠ್ಯದ ಜೊತೆಗೆ ಸೃಜನಶೀಲ ಕಲಾ ಚಟುವಟಿಕೆಯನ್ನು ಮಾಡುತ್ತಿರುವುದು ಶ್ಲಾಘನೀಯ ವಾಗಿದೆ.


ಅನೇಕ ಕಲಾಕೃತಿಗಳು ಫಿಲಂಡ್, ಜರ್ಮನ್ ,ಸೌತ್ ಆಫ್ರಿಕಾ, ದೋಹ, ದೇಶಗಳ ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹ ಗೊಂಡಿದೆ
ಕಾರ್ಯಗಾರದ ನಡುವೆ ಶಿಕ್ಷಣ ಸಂಯೋಜಕರಾದ ಶ್ರೀ ಪ್ರಶಾಂತ್ ಜಿಎನ್ ಸರ್ ರವರು ತರಬೇತಿಯ ಮಧ್ಯಾಹ್ನದ ಅವಧಿಗೆ ಆಗಮಿಸಿ ಕಾರ್ಯಗಾರ ವೀಕ್ಷಿಸಿ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಇಂತಹ ನಾವಿನ್ಯಯೂತ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶ್ಲಾಘನೆ ಮಾಡಿದರು.


ಕಾರ್ಯಗಾರದ ಸಂದರ್ಭದಲ್ಲಿ ಸಿ ಆರ್‌ ಪಿ ಗಳಾದ ಶ್ರೀ ಸಂತೋಷ್ ನಾಯಕ್,ಬಿ ಐ ಆರ್ ಟಿ ಶಾಹಿನ್ ಶೇಖ್,ಪ್ರಥಮ ಪೌಂಡೇಶನ್ ಜಿಲ್ಲಾ ನೋಡಲ್ ಅಧಿಕಾರಿ ಗಳಾಗಿರುವ ಶ್ರೀ ಅಶೋಕ್ ನಾಯಕ್ ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಲಮಾಣಿ ಅವರು ಸರ್ವರನ್ನು ಸ್ವಾಗತಿಸಿದರು ,ಶಿಕ್ಷಕ ಆದರ್ಶ ಜಿ ಟಿ ಕಾರ್ಯಕ್ರಮ ನಿರ್ವಹಿಸಿದರು ಶಾಲಾ ಮಕ್ಕಳು ಪ್ರಾರ್ಥಿಸಿದರು ಶಿಕ್ಷಕಿರಾದ ಶೋಭಾ ಗುನಗಿ ವಾಣಿ ನಾಯ್ಕ್, ಉಪಸ್ಥಿತರಿದ್ದರು ಮಕ್ಕಳೆಲ್ಲ ಸಂತೋಷದಿಂದ ಭಾಗವಹಿಸಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *