


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪೂರ್ವಜರ ಕಾಲದಿಂದಲೂ ತಾಲೂಕಿನ ಕೋಳಿಕೇರಿ ಗ್ರಾಮದಲ್ಲಿ ವೀರಯೋಧರಾಗಿ ಮರಣವನ್ನಪ್ಪಿದ ಕಾಳು ಘಾಡಿ ಮತ್ತು ಬಾಳು ಘಾಡಿ ಸತ್ಪುರುಷರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಜು.2 ರಂದು ಜಾತ್ರೆ ನಡೆಯಲಿದೆ.
ಮಿರಾಶಿ ಕುಟುಂಬದ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದರು ಎನ್ನಲಾದ ಜಾತ್ರಾ ಮಹೋತ್ಸವವು ಹಲವು ವಿಶೇಷತೆಗಳನ್ನು ಹೊಂದಿದೆ. ಸತ್ಪುರುಷರ ಸಮಾಧಿ ಕೋಳಿಕೇರಿಯಲ್ಲಿದ್ದು ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳು, ರೋಗ-ರುಜಿನಗಳನ್ನು ನಿವಾರಿಸುವುದಲ್ಲದೇ ದೈವಿಕ ಪವಾಡಗಳೂ ಸಹ ನಡೆದಿದ್ದು ಜನಜನಿತವಾಗಿದೆ. ಜಾತ್ರೆಗೆ ಕೇವಲ ಊರಿನವರು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸೇವೆಗಳನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ.

ಕಿರವತ್ತಿ ಮೂಲದ ವಿಜಯ್ ವಿ ಮಿರಾಶಿ, ವಿನೋದ್ ಎಚ್ ಮಿರಾಶಿ, ಪ್ರಕಾಶ್ ಆರ್ ಮಿರಾಶಿ ಹಾಗೂ ಮಿರಾಶಿ ಬಂಧುಗಳು , ಆಪ್ತರು ಜಾತ್ರೆಯ ಸಂಪೂರ್ಣ ಜವಾಬ್ದಾರಿ ಹೊತ್ತು ನಿರ್ವಹಿಸಿಕೊಂಡು ಬರುತ್ತಿದ್ದು ಪೂಜಾ ವಿಧಿ-ವಿಧಾನಗಳಿಗೆ ಪೂರ್ವಭಾವಿಯಾಗಿ ಸೇವೆ ಸಲ್ಲಿಸುವವರು ಆನಂದ್ ಮಿರಾಶಿ ಅವರನ್ನು 9845977923 ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಾತ್ರಾ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
