



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ನ್ಯಾಯವಾದಿ ಅಶೋಕ ಹಾರ್ನಳ್ಳಿ ರಾಜ್ಯಾದ್ಯಂತ ಮಹಾಸಭೆಯ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ಈಗಾಗಲೇ ಕ್ರಿಯಾಶೀಲರಾಗಿದ್ದಾರೆ. ಅವರ ನಿರ್ದೇಶನದಂತೆ ಮಹಾಸಭೆಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಯಲ್ಲಾಪುರದಲ್ಲಿ ಬ್ರಾಹ್ಮಣ ಸಭೆಯನ್ನು ಕರೆದು, ಸಂಘಟನೆ ಮತ್ತು ಸದಸ್ಯತ್ವದ ಕುರಿತು ಸಲಹೆ-ಸೂಚನೆ ಪಡೆದು ರಾಜ್ಯಾಧ್ಯಕ್ಷರಿಗೆ ವರದಿ ಒಪ್ಪಿಸಿದ್ದಾರೆ.
ವರದಿಯಲ್ಲಿ ಶಿಫಾರಸು ಮಾಡಿದಂತೆ ಯಲ್ಲಾಪುರ ತಾಲೂಕಿನ ನೂತನ ಸಂಚಾಲಕರಾಗಿ ಶಂಕರ ಭಟ್ಟ ತಾರೀಮಕ್ಕಿ, ಸಹ ಸಂಚಾಲಕರಾಗಿ ಕುಮಾರ ಭಟ್ಟ ಹಂಡ್ರಮನೆ ಇವರನ್ನು ನಿಯೋಜಿಸಿ ಆದೇಶಿಸಲಾಗಿದೆ. ಅಲ್ಲದೇ ತಾಲೂಕಿನ ಆಡಳಿತ ಮಂಡಳಿಯ ನಿರ್ದೇಶಕರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದೆಂದು ನಿರ್ದೇಶಕರಾದ ಪ್ರಸಾದ ಹೆಗಡೆ ಮತ್ತು ಕೆ.ಎಸ್.ಭಟ್ಟ ಪ್ರಕಟಣೆಯಲ್ಲಿ ಮೂಲಕ ತಿಳಿಸಿದ್ದಾರೆ.

