

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ : ತಾಲೂಕು ದಂಡಾಧಿಕಾರಿಯಾಗಿ ಉತ್ತಮ ಹೆಸರುಗಳಿಸಿ ಜನರಿಗೆ ಹತ್ತಿರವಾಗಿದ್ದ ಶ್ರೀಕೃಷ್ಣ ಕಾಮ್ಕರ್ ಅವರನ್ನು ಚುನಾವಣೆ ನಿಮಿತ್ತ ಸ್ಥಳ ಬದಲಿಸಲಾಗಿತ್ತು. ಚುನಾವಣೆ ಮುಗಿದ ನಂತರ ಇತ್ತೀಚಿಗೆ ಪುನಃ ಯಲ್ಲಾಪುರ ತಾಲೂಕಿನ ದಂಡಾಧಿಕಾರಿಯಾಗಿ ಮುಂದುವರೆದಿದ್ದರು. ಸರ್ಕಾರ ಜು.28 ರಂದು ವರ್ಗಾವಣೆ ಮಾಡಿದ್ದು ಶಿರಸಿಯ ಉಪವಿಭಾಗಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡಿರುತ್ತಾರೆ.

ಯಲ್ಲಾಪುರದ ನೂತನ ದಂಡಾಧಿಕಾರಿಯಾಗಿ ಚುನಾವಣಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಗುರುರಾಜ್ ಅವರನ್ನು ಪುನಃ ನೇಮಿಸಲಾಗಿದೆ.
Prathidvani Yellapura