

ಯಲ್ಲಾಪುರ : ಮುಸ್ಲಿಂ ಭಾಂಧವರ ಶ್ರೇಷ್ಠ ಹಬ್ಬಗಳಲ್ಲೊಂದಾದ ಮೊಹರಂ ಆಚರಣೆಯು ತಾಲೂಕಿನಾದ್ಯಂತ ವಿಜೃಂಬಣೆಯಿಂದ ಜರುಗಿತು. ಕಳೆದೆರಡು ದಿನಗಳಿಂದ ಮಳೆಯೂ ಕಡಿಮೆಯಾಗಿದ್ದು ಮೊಹರಂ ಮೆರವಣಿಗೆಗೆ ಅಡಚಣೆ ಇಲ್ಲದಂತಾಗಿತ್ತು.

ಸುಮಾರು 23 ಮೊಹರಂ ಕಮಿಟಿಗಳು ತಾಲೂಕಿನಲ್ಲಿದ್ದು ಆಯಾ ವ್ಯಾಪ್ತಿಯಲ್ಲಿ ಪಂಜದ ಮೆರವಣಿಗೆಯೊಂದಿಗೆ ನಿಯಮಾನುಸಾರ ಧಾರ್ಮಿಕ ಆಚರಣೆಯನ್ನು ಆಚರಿಸಲಾಯಿತು.

ಪಟ್ಟಣದ ತಿಲಕಚೌಕದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ಪಂಜಾಗಳು ಮೆರವಣಿಗೆ ನಡೆಸಿದವು. ಈ ಸಂದರ್ಭದಲ್ಲಿ ಮೊಹರಂ ಕುರಿತಾದ ಗೀತೆಯನ್ನು ಹಾಡುವ ತಂಡದ ಗಾನಸುಧೆ ಮೆರವಣಿಗೆಯ ಉದ್ದಕ್ಕೂ ನಡೆಯಿತು. ಮುಸ್ಲಿಂ ಧರ್ಮೀಯರು ಮಾತ್ರವಲ್ಲದೇ ಇತರೆ ಧರ್ಮದವರೂ ಸಹ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು.ನಂತರ ಪದ್ಧತಿಯಂತೆ ಪಂಜಾಗಳ ಮೆರವಣಿಗೆ ಜೋಡುಕೆರೆಯ ತಟಕ್ಕೆ ತಲುಪಿ ಮುಂದಿನ ಪ್ರಕ್ರಿಯೆ ಮಾಡಲಾಯಿತು.