
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಲಯನ್ಸ್ ಕ್ಲಬ್ ಯಲ್ಲಾಪುರದ ವತಿಯಿಂದ ವನವಾಸಿ ಮಕ್ಕಳ ನಿತ್ಯಾವಶ್ಯಕ ವಸ್ತುಗಳನ್ನು ಅತ್ಯಂತ ಸಂತಸದಿಂದ ವಿತರಿಸಿದ್ದೇವೆ.

ಬದುಕಿನಲ್ಲಿ ಸಾಧನೆಯ ಛಲವಿದ್ದು ಆ ಪ್ರಯತ್ನದಲ್ಲಿ ಸಾಗುವಾಗ ಬರುವ ಎಡರು-ತೊಡರುಗಳನ್ನು ಮೀರಿ ಒಂದು ನಿರ್ಧಿಷ್ಟ ಗುರಿ ಹೊಂದಿ ಗೆಲುವನ್ನು ನಿಮ್ಮದಾಗಿಸಿಕೊಳ್ಳಬೇಕು. ಆಗ ನಿಮ್ಮ ವಿದ್ಯೆ ಮತ್ತು ವಸತಿ ನೀಡಿದ ವಿಠ್ಠಲ ವನವಾಸಿ ಕಲ್ಯಾಣದ ಧ್ಯೇಯೋದ್ದೇಶ ಸಾಕಾರಗೊಳ್ಳಲಿದೆ ಎಂದು ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಬೋರ್ಕರ್ ಹೇಳಿದರು.

ಅವರು ಪಟ್ಟಣದ ವಿಠ್ಠಲ ವನವಾಸಿ ಕಲ್ಯಾಣ ವಸತಿ ನಿಲಯಕ್ಕೆ ಅಗತ್ಯ ವಸ್ತುಗಳಿರುವ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕರು, ಸಿಬ್ಬಂದಿಗಳು, ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ವನವಾಸಿ ಕಲ್ಯಾಣ ಕೇಂದ್ರದ ಹಿತೈಷಿಗಳು ಉಪಸ್ಥಿತರಿದ್ದರು.