




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈ.ಟಿ.ಎಸ್.ಎಸ್ ಸಭಾಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದರ ಅಡಿಯಲ್ಲಿ ಮಾಹಿತಿ ಕಾರ್ಯಾಗಾರವನ್ನು ಜೂ.20 ರ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ , ಅದರ ಮಹತ್ವ ಏನೆಂಬುದನ್ನು ವಿವರವಾಗಿ ತಿಳಿಸಲಾಯಿತು. ವಿಶೇಷವಾಗಿ ಹಾವಿನ ಸಂಕುಲದ ಸಂರಕ್ಷಣೆ ಮತ್ತು ಅದರಿಂದ ಅನಾಹುತ ಸಂಭವಿಸಿದಲ್ಲಿ ಪಡೆದುಕೊಳ್ಳಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಅನಿಮಲ್ ವೆಲ್ಫೇರ್ ರೀಸರ್ಚ್ ಫೌಂಡೇಶನ್ನ ದತ್ತಾತ್ರೇಯ ನಾಗನಾಥ ಮುರ್ಕೋಟೆ, ಉಪಾಧ್ಯಕ್ಷ ಅಕ್ಬರ ಅಲಿ ಶೇಖ ಉಪನ್ಯಾಸ ನೀಡಿದರು. ಒಂದಾನುವೇಳೆ ಹಾವಿನ ಕಡಿತವಾದಲ್ಲಿ ಪ್ರಥಮ ಚಿಕಿತ್ಸೆಗೆ ತಕ್ಷಣಕ್ಕೆ ಸಂಪರ್ಕಿಸುವಂತೆ 7499439920 ಮತ್ತು 7483240263 ದೂರವಾಣಿ ಸಂಖ್ಯೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವೈ.ಟಿ.ಎಸ್.ಎಸ್ ಪ್ರಾಂಶುಪಾಲ ಆನಂದ ಹೆಗಡೆ, ಉಪನ್ಯಾಸಕರಾದ ರವೀಂದ್ರ ಗಾಂವ್ಕರ, ಮನೋಹರ ಶಾನಭಾಗ , ಪರ್ವೀನ್ಬಾನು ಸುಂಕದ, ಶೈನಾಜ್ ಶೇಖ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Prathidvani Yellapura