Breaking News

ಯಲ್ಲಾಪುರದ ನಾಲ್ಕು ಜಮಾತ್ ಮತ್ತು ದರ್ಗಾ ಉರುಸ್ ಕಮಿಟಿ ವತಿಯಿಂದ ಅದ್ದೂರಿ “ಉರುಸ್ ಆಚರಣೆ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ನಾಲ್ಕು ಜಮಾತ್ ಮತ್ತು ಹಜರತ್-ಸೈಯದ್- ಸಿದ್ದಿಕ್-ಶಾ-ವಲಿ ದರ್ಗಾ ಕಮಿಟಿ ವತಿಯಿಂದ  4 ದಿನಗಳ ವಿಜ್ರಂಭಣೆಯ ಉರುಸ್ ಆಚರಣೆ ನಡೆಸಲಾಗುತ್ತಿದ್ದು ಸರ್ವ ಧರ್ಮಿಯರಿಗು ಮುಸ್ಲಿಂ ಸಮಾಜದ ವತಿಯಿಂದ ಸ್ವಾಗತಿಸುತ್ತೇವೆ ಎಂದು ಉರುಸ್ ಕಮಿಟಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೈಯದ್ ಹೇಳಿದರು.


     ಅವರು ನಾಲ್ಕು ಜಮಾತ್ ಮತ್ತು ದರ್ಗಾ ಉರುಸ್ ಕಮಿಟಿ ಅಡಿಯಲ್ಲಿ ಆಚರಿಸಲಾಗುತ್ತಿರುವ ಉರುಸ್ ಕಾರ್ಯಕ್ರಮದ ಕುರಿತು ದರ್ಗಾಗಲ್ಲಿ ಶಾದಿ ಮಹಲ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


    ಯಲ್ಲಾಪುರ ಪಟ್ಟಣದ ಪ್ರಮುಖ ನಾಲ್ಕು ಜಮಾತ್ ಗಳಾದ ಮೊಹಲ್ಲಾ ಗೌಸಿಯಾ ಜಮಾತ್, ಜುಮ್ಮಾ ಮಸ್ಜಿದ್ ಜಮಾತ್, ಮಸ್ಜಿದ್-ಇ-ಬಿಲಾಲ್ ಜಮಾತ್, ಮಸ್ಜಿದ್-ಇ-ಗರಿಬ್-ನವಾಝ್ ಜಮಾತ್ ಹಾಗು ದರ್ಗಾ ಉರುಸ್ ಕಮಿಟಿ ಅಡಿಯಲ್ಲಿ ನಾಲ್ಕು ದಿನಗಳ ಅದ್ದೂರಿ ಉರುಸ್ ಆಚರಿಸಲಾಗುತ್ತಿದೆ.


    ದಿನಾಂಕ 21 ರಂದು ದರ್ಗಾ ನೂತನ ಕಟ್ಟಡ ಉದ್ಘಾಟನೆ ಮತ್ತು ಸಾಮೂಹಿಕ ಕುರಾನ್ ಪಠಣ ಹಾಗು ಧ್ವಜ ಉತ್ಸವ ಜರುಗಲಿದೆ

ನೂತನ ದರ್ಗಾ ವಿಡಿಯೋ ವೀಕ್ಷಣೆಗೆ ಇಲ್ಲಿ ಒತ್ತಿ,☝


ಡಿ 22 ರಂದು ಸಂಜೆ ಗೌಸಿಯಾ ಮಸೀದಿ ಯಿಂದ ಬೃಹತ್ ಸಂದಲ್ ಮೆರವಣಿಗೆ ಇದ್ದು
ಕೇರಳದ ಕಾಸಗೋಡಿನಿಂದ ಆಗಮಿಸುವ ತಂಡದಿಂದ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಮತ್ತು  ರಾತ್ರಿ 9-30 ರಿಂದ ಸರ್ವ ಧರ್ಮಿಯರಿಗು ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ.


     ಡಿ,23 ರಂದು ನೂತನ ನಗರದ ಗರೀಬ್ ನವಾಝ್ ಮಸೀದಿಯಿಂದ ಪವಿತ್ರ ಚಾದರ್ ಹೊದಿಸುವ ಗಲೇಪ್ ಮೆರವಣಿಗೆ ಇದ್ದು ರಾತ್ರಿ ಸರ್ವಧರ್ಮಿಯರಿಗು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಉತ್ತರ ಪ್ರದೇಶದಿಂದ ಆಗಮಿಸ ಧಾರ್ಮಿಕ ಗುರುಗಳಿಂದ ಧರ್ಮ ಪ್ರವಚನ ಏರ್ಪಡಿಸಲಾಗಿದ್ದು ಬಿಜಾಪುರದಿಂದ ಆಗಮಿಸುವ ಹನೀಫ್ ರಝಾ ಅವರಿಂದ ಧಾರ್ಮಿಕ ಗೀತಗಾಯನ ಏರ್ಪಡಿಸಲಾಗಿದೆ.


      ಡಿ,24 ರಂದು ಮುಂಬಯಿಂದ ಆಗಮಿಸುವ ಸರ್ಫರಾಝ್ ಸಾಬ್ರಿ ಮತ್ತು ಅಜೀಮ್ ನಾಝಾ ಖ್ಯಾತ ಕವ್ವಾಲಿ ತಂಡದವರಿಂದ ಕವ್ವಾಲಿ ಕಾರ್ಯಕ್ರಮ; ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.


     ವಿಶೇಷವಾಗಿ ಈ ಎಲ್ಲಾ ಕಾರ್ಯಗಳು ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ ನಡೆಯಲಿದೆ ಎಂದು ತಿಳಿಸಿದರು.


    ಈ ಸಂದರ್ಭದಲ್ಲಿ ಗೌಸಿಯಾ ಮಸೀದಿ ಜಮಾತ್ ಪ್ರಮುಖ ಅಬ್ದುಲ್ ಕರೀಂ ಉಮರ್ ಶೇಖ್, ಬಿಲಾಲ್ ಮಸೀದಿ ಜಮಾತ್ ಪ್ರಮುಖ ಪಿ.ಟಿ.ಸುಲೇಮಾನ್, ಗರಿಬ್ ನವಾಝ್ ಮಸೀದಿ ಜಮಾತ್ ಪ್ರಮುಖ ಅಬ್ದುಲ್ ಹಮೀದ್ ಮುಲ್ಲಾ, ಉರುಸ್ ಸಂಘಟನೆ ಪ್ರಮುಖರಾದ ನಿಜಾಮುದ್ದೀನ್ ಟಿ.ಪಿ, ಖಾಜಾ ಮೈಯ್ಯುದ್ದೀನ್ ಅತ್ತಾರ, ಮಹಮ್ಮದ್ ಗೌಸ್, ಶಾಭಾಝ್ ಸೈಯದ್ ತಬ್ರೇಝ್, ಮಹಮ್ಮದ್ ಹನೀಫ್ ಶೇಖ್ ಇನ್ನಿತರರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *