Breaking News

ಯಲ್ಲಾಪುರದಲ್ಲಿ ಮೊಳಗಿದ ಕಮಲ ಕಹಳೆ- ವಿಜಯ ಸಂಕಲ್ಪ ರಥ ಯಾತ್ರೆಗೆ ಸಚಿವ ಹೆಬ್ಬಾರ್ ಅದ್ದೂರಿ ಸ್ವಾಗತ

ಗ್ರಾಮದೇವಿ ಅನುಗ್ರಹದಲ್ಲಿ….. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…..

ಪ್ರತಿಧ್ವನಿ,ಯಲ್ಲಾಪುರ : ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆ ಯಲ್ಲಾಪುರಕ್ಕಾಗಮಿಸಿದ್ದು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಸಚಿವ ಹೆಬ್ಬಾರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸಚಿವ ಹೆಬ್ಬಾರ್ ಯಲ್ಲಾಪುರದ ಶಕ್ತಿ ದೇವತೆ ಗ್ರಾಮದೇವಿ ದೇವಾಲಯದಲ್ಲಿ ತಾಯಿಯರಿಗೆ ಉಡಿತುಂಬಿ ನಮಿಸಿದರು


ದೇವಿದೇವಸ್ಥಾನದ ಮೂಲಕ ಸಾಗಿದ ರಥಯಾತ್ರೆಯಲ್ಲಿ ಸಾವಿರಕ್ಕು ಅಧಿಕ ಕಾರ್ಯಕರ್ತರು ನಾಗರಿಕರು ಹೆಬ್ಬಾರ್ ಅಭಿಮಾನಿಗಳು ಹೆಜ್ಜೆ ಹಾಕಿದರು.

ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಹೆಬ್ಬಾರ್ ಅವರೊಂದಿಗೆ ಹೆಜ್ಜೆ ಹಾಕಿದ ನೂರಾರು ಕಾರ್ಯಕರ್ತರು


ಮೆರವಣಿಗೆಯಲ್ಲಿ ಸಿದ್ದಿ ಸಮುದಾಯದ ಪಾರಂಪರಿಕ ನೃತ್ಯ, ಹಾಗು ಡೊಳ್ಳು ಕುಣಿತದ ಮೆರುಗು ಮೆರವಣಿಗೆಯ ಅಂದ ಹೆಚ್ಚಿಸಿತ್ತು. ಹೆಬ್ಬಾರ್ ಅವರಿಗೆ ಜಯವಾಗಲಿ ಎಂಬ ಜಯಘೋಷದೊಂದಿಗೆ ದೇವಿದೇವಸ್ಥಾನದ ರಸ್ತೆ ಮೂಲಕ ” ವಿಜಯ ಸಂಕಲ್ಪ ಹೊತ್ತ ರಥದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಮೆರವಣಿಗೆಯ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಕರೆತರಲಾಯಿತು.

ಮೆರವಣಿಗೆಯಲ್ಲಿ ಸಿದ್ದಿ ಸಮುದಾಯದ ಪಾರಂಪರಿಕ ನೃತ್ಯ ಡಮಾಮಿ ಕುಣಿತದ ಸೊಬಗು

ಮೆರವಣಿಗೆಯಲ್ಲಿ ಡೊಳ್ಳು ಕಣಿತದ ಸೊಗಸು

ಮೆರವಣಿಗೆ ಸಾಗಿ ಅಂಬೇಡ್ಕರ್ ವೃತ್ತ ತಲುಪಿ ಕಾರ್ಯಕರ್ತರನ್ನುದ್ದೇಶಿಸಿ ಕೆಲವು ಪ್ರಮುಖರು ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ವಿಜಯ ಸಂಕಲ್ಪ ರಥದಲ್ಲಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಶಿವರಾಮ್ ಹೆಬ್ಬಾರ್


ಮೆರವಣಿಗೆ ಅಂಬೇಡ್ಕರ್ ವೃತ್ತ ತಲುಪುತ್ತಿದ್ದಂತೆ ಸೇರಿಕೊಂಡ ಬಿಜೆಪಿ ಹಿರಿಯ ನಾಯಕ ಬೃಹತ್ ಕೈಗಾರಿಕೆ ಮಂತ್ರಿ ಮುರುಗೇಶ್ ನಿರಾಣಿ ಮತನಾಡಿ ರಾಜ್ಯ ವಿಧಾನಸಭೆ ಯಲ್ಲಿನ ಎಲ್ಲಾ ಶಾಸಕರು ಮತ್ತು ಸಚಿವರಲ್ಲಿ ಕ್ಷೇತ್ರದ ಜನರ ಬಗ್ಗೆ ಹೆಚ್ಚಿನ ಕಾಳಜಿ, ಅಭಿವೃದ್ಧಿ ಕುರಿತು ತುಡಿತ, ರೈತಾಪಿ ವರ್ಗದ ಏಳಿಗೆಯ ಮಿಡಿತ ಹೊಂದಿರುವ ಏಕೈಕ ನಾಯಕ ಸಚಿವ ಹೆಬ್ಬಾರ್ ಅವರು ಎಂದು ಹೆಬ್ಬಾರ್ ಗುಣಗಾನ ಮಾಡಿದರು.


ಸಂಕಷ್ಟ ಕಾಲದಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕೇಂದ್ರದಲ್ಲಿ ಮೋದಿಯವರ ನೇತೃತ್ವ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರ ಮುಂದಾಳತ್ವ ಉತ್ತಮ ಆಡಳಿತಕ್ಕೆ ದಾರಿಯಾಗಿದೆ. ಚುನವಣೆ ಎಂಬುದು ನಮ್ಮ ಅಭಿವೃದ್ಧಿ ಕಾರ್ಯಗಳ ಮಾನದಂಡವಾಗಿದೆ ನಮ್ಮ ಪಕ್ಷದ ದೇವದುರ್ಲಭ ಕಾರ್ಯಕರ್ತ ಸೈನಿಕರು ಸನ್ನದ್ದರಾಗಿದ್ದು ಬಿಜೆಪಿ ಗೆಲುವಿಗೆ ಕಂಕಣ ತೊಟ್ಟಿದ್ದಾರೆ ಎಂದು ಸಚಿವ ಹೆಬ್ಬಾರ್ ಹೇಳಿದರು.

ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಗೆ ಪೊಲೀಸ್ ಸರ್ಪಗಾವಲು


ರಥಯಾತ್ರೆ ಮೆರವಣಿಗೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು

ಬಿಜೆಪಿ ರಥಯಾತ್ರೆ ಸಂಭ್ರಮಕ್ಕೆ ಮೆರುಗು ತಂದ ಬಿಜೆಪಿ ಮಹಿಳಾ ಘಟಕದವರ ಜಯಘೋಷ ಮತ್ತು ಸಂಭ್ರಮ
ಬಿಜೆಪಿ ವಿಜಯ ಸಂಕಲ್ಪ ರಥಕ್ಕೆ ಪುಷ್ಪವೃಷ್ಟಿ

ರಥ ಯಾತ್ರೆಯಲ್ಲಿ ಹಿರಿಯ ನಾಯಕ ಪ್ರಮೋದ್ ಹೆಗಡೆ, ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್ ಸೇರಿದಂತೆ ರಾಜ್ಯ ನಾಯಕರು,ಜಿಲ್ಲಾ ಪ್ರಮುಖರು ಮಾತನಾಡಿದರು.
ಭಾರತೀಯ ಜನತಾ ಪಕ್ಷದ ಯಲ್ಲಾಪುರ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಯುವ ನಾಯಕ ವಿವೇಕ್ ಹೆಬ್ಬಾರ್, ಪಕ್ಷದ ಎಲ್ಲಾ ಮೊರ್ಚಾ, ಶಕ್ತಿಕೇಂದ್ರ, ಬೂತ್ ಗಳ, ಮಹಿಳಾ ಘಟಕದ ಪ್ರಮುಖರು. ಜನಪ್ರತಿನಿಧಿಗಳು, ಉಪಸ್ಥತಿತರಿದ್ದರು.
ನಂತರ ವಿಜಯ ಸಂಕಲ್ಪ ರಥವು ಬೆಲ್ ರಸ್ತೆಯ ಮೂಲಕ ಸಾಗಿ ಅಂಕೋಲಾ ಕಡೆಗೆ ತೆರಳಿತು

ಯಲ್ಲಾಪುರ ದಿಂದ ಅಂಕೋಲಾ ಕಡೆಗೆ ತೆರಳಿದ ವಿಜಯ ಸಂಕಲ್ಪ ರಥ

ಜಾಹಿರಾತು ನೀಡಿ ಯಲ್ಲಾಪುರ ನೆಲದ ” ಪ್ರತಿಧ್ವನಿ ” ಪ್ರೋತ್ಸಾಹಿಸಿ

ಜಗತ್ತಿಗೆ ಆಧ್ಯಾತ್ನ ಶಕ್ತಿ ತುಂಬಲು ಭಾರತದ ಹಿಂದುತ್ವ ಗಟ್ಟಿಗೊಳಿಸಬೇಕಿದೆ… ಬನ್ನಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೊರಳ ತುಂಬಾ ಓಂಕಾರದ ನಿನಾದದಲ್ಲಿ….. ಜೈ ಶ್ರೀ ರಾಮ್

ಸರ್ವರಿಗು ಸುಸ್ವಾಗತ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *