ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಅಡಿಯಲ್ಲಿ ಕಳೆದ 18 ವರ್ಷಗಳಿಂದ ಸಂಸ್ಕಾರಯುತ ಮತ್ತು ಸಾತ್ವಿಕವಾದ ಬೇಸಿಗೆ ಶಿಭಿರ ನಡೆಸುತ್ತಿದ್ದು ಈ ವರ್ಷವು ಏಪ್ರಿಲ್11 ರಿಂದ 19 ನೆ ವರ್ಷದ ಒಂದು ತಿಂಗಳ ಮಕ್ಕಳ ಬೇಸಿಗೆ ಶಿಭಿರ ನಡೆಸಲಾಗುತ್ತಿದ್ದು ಸರ್ವರು ಸಹಕರಿಸಬೇಕಿದೆ ಎಂದು ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು.

ಅವರು ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬೇಸಿಗೆ ಶಿಭಿರದ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಶಾಲಾ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯದ ವಿದ್ಯೆ ಕಲಿಸಲಾಗುತ್ತದೆ. ನಮ್ಮ ಬೇಸಿಗೆ ಶಿಭಿರದಲ್ಲಿ ಜೀವನ ಸಾಕ್ಷಾತ್ಕಾರಕ್ಕೆ ಬೇಕಾದ ಎಲ್ಲ ಮೌಲ್ಯಗಳನ್ನು ಕಲಿಸಲಾಗುತ್ತದೆ.ಭಗವದ್ಗೀತೆ, ಯೋಗ,ಸಂಗೀತ, ನೃತ್ಯ,ನಾಟಕ, ಚಿತ್ರಕಲೆ,ಕರಾಟೆ, ಕ್ರಾಫ್ಟ್, ಕಂಪ್ಯೂಟರ್ ಕಲಿಕೆ, ಇನ್ನಿತರ ವಿಶೇಷ ಕಲೆಗಳನ್ನು ಕಲಿಸಲಾಗುತ್ತದೆ ಎಂದು ವಿವರಿಸಿದರು.
ಹೆಚ್ಚಿನ ಮಾಹಿತಿಗಾಗಿ ರಂಗ ಸಹ್ಯಾದ್ರಿ ಬಳಗದವರನ್ನು ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ತಾಂಡುರಾಯನ್, ಸುಮಂಗಲಾ ಜೋಶಿ, ಕರಾಟೆ ಶಿಕ್ಷಕ ಪರಮೇಶ್ವರ ನಾಯ್ಕ್, ಪಾರ್ವತಿ ಕಟ್ಟೀಮನೆ, ಸುಬ್ರಾಯ್ ಇನ್ನಿತರರು ಉಪಸ್ಥಿತರಿದ್ದರು.
ಶಿಭಿರಕ್ಕೆ ಸೇರಲು ಹೆಸರು ನೊಂದಾಯಿಸಲು ಮಾಹಿತಿ ಪಡೆಯಲು ಕೆಳಗೆ ತೋರಿಸಿದ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.



Prathidvani Yellapura