
ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…
,ಪ್ರತಿಧ್ವನಿ, ಯಲ್ಲಾಪುರ: ಆಧುನಿಕತೆಯಲ್ಲಿ ಅವಕಾಶಗಳು ಮಹಿಳೆಯರಿಗೆ ಹಿಂದಿಗಿಂತಲೂ ಈಗ ಹೆಚ್ಚು ತೆರೆದುಕೊಂಡಿದೆ. ಸಾಂಪ್ರದಾಯಿಕವಾಗಿ ಪ್ರಚಲಿತದಲ್ಲಿದ್ದ ಒಂದು ಗಾದೆಮಾತು ಎರಡು ಜಡೆ ಸೇರಿದರೆ ಜಗಳ ಎನ್ನುವುದು ವಜ್ರಳ್ಳಿಯ ಒಕ್ಕೂಟದ ಸದಸ್ಯೆಯರ ಪಾಲಿಗೆ ಸುಳ್ಳಾಗಿದೆ.
ಸಂಘಟನಾತ್ಮಕವಾಗಿ ಒಗ್ಗೂಡಿದಾಗ ಇಂತಹ ಸಾಧನೆ ಮಾಡಲು ಸಾಧ್ಯ.ಸ್ಪರ್ಧಾತ್ಮಕವಾದ ಇಂದಿನ ಯುಗದಲ್ಲಿ ಮಹಿಳೆಯರ ಸಬಲೀಕರಣವು ಅಭಿವೃದ್ದಿ ಯ ಮುನ್ನುಡಿಯಾಗಿದೆ . ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯಲ್ಲಿ ನಡೆದ “ಭಾಗ್ಯಶ್ರೀ ಸಂಜೀವಿನಿ ಒಕ್ಕೂಟ” ದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆಯ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಯಲ್ಲಾಪುರ ತಾ.ಪಂ ಕಾರ್ಯನಿರ್ವಾಹಕರಾದ ಜಗದೀಶ ಕಮ್ಮಾರ ಮಾತನಾಡಿ ಸ್ರ್ತೀಯರು ಒಟ್ಟಾಗಿ ಮಾಡುವ ಕೆಲಸದಲ್ಲಿ ಶಕ್ತಿ ಇದೆ. ಮಾದರಿಯಾಗಿರುವ ಕಾಯಕವನ್ನು ಸಮಾಜ ಗುರುತಿಸಿ ಪ್ರೋತ್ಸಹಿಸುವ ಮೂಲಕ ಉತ್ತಮ ಕೊಡುಗೆ ಸಿಗಲಿದೆ. ಮಹಿಳೆಯರ ಸೂಕ್ಷ್ಮ ಪ್ರಜ್ಞೆಯು ಆಕೆಯನ್ನು ಬೆಳಸಬಲ್ಲದು. ಭಾಗ್ಯಶ್ರೀ ಸಂಜೀವಿನಿಒಕ್ಕೂಟ ಈ ಸಲದ ರಾಜ್ಯ ಪ್ರಶಸ್ತಿ ಪಡೆದಿರುವುದು ಈ ನೆಲದ ಭಾಗ್ಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಭಾಗ್ಯಶ್ರೀ ಸಂಜೀವಿನಿ ಒಕ್ಕೂಟ ದ ಅಧ್ಯಕ್ಷರಾದ ಗಾಯತ್ರಿ ಗಾಂವ್ಕಾರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಸಹಾಯಕರಾದ ಮಂಜುನಾಥ ಆಗೇರ,ಗ್ರಾಮ ಪಂಚಾಯತ ಉಪಾಧ್ಯಕ್ಷೆ ರತ್ನಾ ಬಾಂದೇಕರ ,ಪಂಚಾಯತ ಅಭಿವೃದ್ದಿ ಅಧಿಕಾರಿ ಸಂತೋಷಿ ಆರ್ ಬಂಟ್, ಕಾರ್ಯದರ್ಶಿ ಜಿ ಎಸ್ ಪತ್ರೇಕರ್, ಎನ್ ಆರ್ ಎಲ್ ಎಮ್ ನ ವ್ಯವಸ್ಥಾಪಕ ಮಂಜಣ್ಣಾ, ಪತ್ರಕರ್ತರಾದ ಪ್ರಭಾ ಜಯರಾಜ್, ಸುಬ್ರಾಯ ಬಿದ್ರೆಮನೆ, ದತ್ತಾತ್ರೇಯ ಭಟ್ಟ ಕಣ್ಣಿಪಾಲ ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.



ಸಂಗೀತಾ ಗಾಂವ್ಕಾರ, ಪಾರ್ವತಿ ಭಟ್ಟ ರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಕ್ಕೂಟ ದ ಊಪಾಧ್ಯಕ್ಷೆ ಅನ್ನಪೂರ್ಣ ಭಟ್ಟ ಸ್ವಾಗತಿಸಿದರು.
ಎನ್ ಆರ್ ಎಲ್ ಎಮ್ ನ ಸಂಯೋಜಕ ರಾಜಾರಾಮ ವೈಧ್ಯ ಪ್ರಾಸ್ತಾವಿಕ ಮಾತನಾಡಿದರು.
ಪುಸ್ತಕ ಬರಹಗಾರ್ತಿ ಶರೀಫಾ ಬಿ ಮುಲ್ಲಾ ಅಭಿನಂದನಾ ಪತ್ರ ವಾಚಿಸಿದರು. ವೀಣಾ ಹೆಬ್ಬಾರ,ಮತ್ತು ಲಲಿತಾ ಸಿದ್ದಿ ನಿರ್ವಹಿಸಿದರು. ಹೇಮಾವತಿ ಆಚಾರಿ ವಂದಿಸಿದರು.


Prathidvani Yellapura