Breaking News

ಯಲ್ಲಾಪುರದ ಬಿಲ್ಲಿಗದ್ದೆ ಪರಿಸರದಲ್ಲಿ ಅರಣ್ಯ ಅತಿಕ್ರಮಣ ಇದು ಅರಣ್ಯರೋಧನ.!!


ಕೇಬಲ್ ನಾಗೇಶ್, ಯಲ್ಲಾಪುರ 🖋


ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಗೆ ಬರುವ ಬಿಲ್ಲಿಗದ್ದೆ ಎಂಬಲ್ಲಿ ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿರುವುದಲ್ಲದೆ ಅರಣ್ಯ ಇಲಾಖೆಯ ಭಯವಿಲ್ಲದೆ ನಿಧಾನವಾಗಿ  ಅಪ್ಪಟ ಅರಣ್ಯವನ್ನು ತೋಟ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.

ಕಾರಣ ಕಳೆದ ಎರಡು ವರ್ಷಗಳ ಹಿಂದೆ ಕೊಂಡುಕೊಂಡ ಸ್ಥಳಕ್ಕೆ ಹೊಂದಿಕೊಂಡ ಬೆಲೆಬಾಳುವ ಅಪ್ಪಟ ಅರಣ್ಯ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸಲಾಗಿದೆ.
ಇಷ್ಟೆಲ್ಲಾ ಅವಾಂತರಗಳ ನಡುವೆ ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂಬ ಸಹಜವಾದ ಪ್ರಶ್ನೆ ಎಲ್ಲರನ್ನು ಕಾಡುವುದು ಸಹಜ ಅದಕ್ಕು ಅರಣ್ಯ ಇಲಾಖೆ ಉತ್ತರಕೊಟ್ಟಿದೆ ಈ ಕುರಿತು ನಮಗೆ ದೂರು ಬಂದಿತ್ತು ಅದಕ್ಕೆ ಸಂಬಂಧಿಸಿದಂತೆ ವರದಿ ಕೊಟ್ಟಿದ್ದೇವೆ ಎಂದು ಹಾಗಾದರೆ ಈ ರೀತಿ ಅರಣ್ಯಕ್ಕೆ ಬೇಲಿ ಹಾಕಿ ತನಗಿಷ್ಟ ಬಂದಂತೆ ಗಿಡಗಳನ್ನು ಕಡಿದು ತನ್ನ ಸುಪರ್ದಿಗೆ ಸೇರಿದೆ ಎಂಬಂತೆ ನಡೆದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಹಾಗು ಇದಕ್ಕೆ ಇಲಾಖೆ ಕೊಟ್ಟಿರುವ ವರದಿ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕಿದೆ. ಇಲ್ಲವಾದಲ್ಲಿ ಅನೇಕ ದಲಿತ ಕುಟುಂಬಗಳು ಸ್ವಂತ ಭೂಮಿ ಇಲ್ಲದೆ ಇರುವುದರಿಂದ ಅವರೆಲ್ಲರು ಇದೇರೀತಿ ನೂತನವಾಗಿ ಅರಣ್ಯ ಅತಿಕ್ರಮಿಸಿ ತಮಗಿಷ್ಟಬಂದಂತೆ ಬದುಕು ನಡೆಸಲು ಸಿದ್ದರಿದ್ದಾರೆ.


ಬಲ್ಲ ಮೂಲಗಳ ಪ್ರಕಾರ ಸರ್ವೇ ನಂ-26 A1A1A1 ಈ ಭೂಮಿ ಹಿಂದೆ ಬೇರೊಬ್ಬರ ಮಾಲೀಕತ್ವದಲ್ಲಿ ಕೃಷಿ ಭೂಮಿಯಾಗಿದ್ದಿದ್ದನ್ನು 2016 ರಲ್ಲಿ ಎನ್.ಎ ಲ್ಯಾಂಡ್ ಆಗಿ ಪರಿವರ್ತಿಸಲಾಗಿದೆ. ಕೃಷಿ ಭೂಮಿ ಇದ್ದ ಸಂದರ್ಭದಲ್ಲಿ ಇದಕ್ಕೆ ಹೊಂದಿಕೊಂಡ ಸ್ಟ್ರಿಪ್ ಇತ್ತು ಯಾವಾಗ ಕೃಷಿ ಭೂಮಿ ಎನ್.ಎ ಭೂಮಿಯಾಗಿ ಪರಿವರ್ತಿಸಲಾಯಿತೊ ಅಂದಿಗೆ ಸ್ಟ್ರಿಪ್ ಭೂಮಿ ಎಂಬುದನ್ನು ತೆಗೆದು ಹಾಕಲಾಗಿ ಸಹಜವಾಗಿ ಅರಣ್ಯಭೂಮಿಯಾಗುತ್ತದೆ. ಇದು ಸೇರಿದಂತೆ 7 ಎಕರೆಗು ಅಧಿಕ ಅರಣ್ಯ ಪ್ರದೇಶ ವ್ಯಾಪಿಸಿದ್ದು ಇದೆಲ್ಲವನ್ನು ಕಬಳಿಸುವ ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ.


ಮೇಲ್ನೋಟಕ್ಕೆ ಅಪ್ಪಟ ಅರಣ್ಯ ಭೂಮಿ ತೋಟವಾಗಿ ಮಾರ್ಪಾಡಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಇದುವರೆಗು ಅರಣ್ಯಕ್ಕೆ ದಕ್ಕೆ ಮಾಡಿ ಬೆಲೆಬಾಳುವ ಗಿಡಗಳ ನಾಶಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕಿದೆ.ಇಲ್ಲವಾದಲ್ಲಿ ಇದೇ ರೀತಿ ಹೊಸ ಅತಿಕ್ರಮಣಕ್ಕೆ ಭೂಮಿ ಹೊಂದದ ದಲಿತರಿಗೆ ಭೂ ರಹಿತ ಬಡಜನರಿಗು ಅವಕಾಶ ಕಲ್ಪಿಸಬೇಕಿದೆ ಎಂಬುದು ಹಲವು ಜನರ ಆಗ್ರಹವಾಗಿದೆ.


ವಿಶೇಷ ಎಂದರೆ ಈ ಜಾಗ ಕೊಂಡುಕೊಂಡ ಕುಟುಂಬ ಅರಣ್ಯ ಇಲಾಖೆಯಲ್ಲಿ ವೃತ್ತಿ ನಿರ್ವಹಿಸುವವರದೆನ್ನುವುದು ದುರಂತವಾಗಿದೆ. ಹೊಸದಾಗಿ ಅರಣ್ಯ ಅತಿಕ್ರಮಿಸುವುದು ಅಪರಾದ ಎಂದು ಹೇಳುವ ಇಲಾಖೆಲಿದ್ದುಕೊಂಡು ಅತಿಕ್ರಮಣ ಮಾಡಿದರೆ ಸಾಮಾನ್ಯರು ಮಾಡುವುದರಲ್ಲಿ ತಪ್ಪೇನಿದೆ ? ವಾಸ್ತವ್ಯಕ್ಕಾಗಿ 30/40 ರಲ್ಲಿ ಗುಡಿಸಲು ನಿರ್ಮಿಸಿ ಬದುಕು ಸಾಗಿಸಲು ಮುಂದಾಗುವ ಬಡ ಕುಟುಂಬಗಳ ಗುಡಿಸಲು ಕೀಳುವ ಅರಣ್ಯ ಇಲಾಖೆ ಈ ಪ್ರಕರಣದಲ್ಲಿ ಮೌನವಾಗಿರುವುದೇಕೆ ? ಕ್ರಮ ಕೈಗೊಳ್ಳದಿರುವುದೇಕೆ ? ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಸಾಮಾನ್ಯರನ್ನು ಕಾಡುತ್ತಿದೆ.
ಅರಣ್ಯ ಇಲಾಖೆ ಈ ಕೂಡಲೆ ಈ ಸ್ಥಳದ ಸಂಪೂರ್ಣ ಮಾಹಿತಿ ಪಡೆದು ಕಾನೂನಾತ್ಮಕವಾಗಿ ಸರಿ ಇದೆ ಎನಿಸಿದರೆ ದಾಖಲೆ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ  ಅತಿಕ್ರಮಣವಾಗಿರುವ ಅಪ್ಪಟ ಅರಣ್ಯ ಭೂಮಿಯನ್ನು ಯಾವುದೇ ಕಾರಣಕ್ಕು ಬಿಟ್ಟುಕೊಡದೆ ತನ್ನ ಸುಪರ್ಧಿಗೆ ಪಡೆಯಬೇಕು. ಹಾಗೊಂದು ವೇಳೆ ಹಣಬಲ,ತೋಳ್ಬಲ,ಅಧಿಕಾರ ಬಲದಿಂದ  ಹೊಸ ಅತಿಕ್ರಮಣ ಭೂಮಿಯನ್ನು ಅವರಿಗೆ ಬಿಟ್ಟು ಕೊಡುವುದಾದರೆ ತಾಲೂಕಿನ ಬೇರೆಡೆಗು ಇದೇ ಕಾನೂನನ್ನು ಲಾಗು ಮಾಡಬೇಕಿದೆ ಎಂಬುದು ಹಲವು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದೇ ರೀತಿ ಹೊಸ ಅತಿಕ್ರಮಣದ ವಿರುದ್ದ ಕ್ರಮ ಜರುಗಿಸದಿದ್ದರೆ ಅರಣ್ಯ ಇಲಾಖೆ ಮೇಲಿನ ಭಯ ಮತ್ತು ನಂಬಿಕೆ ಎರಡನ್ನು ಕಳೆದುಕೊಳ್ಳುವ ಆತಂಕವಿದೆ ಎನ್ನುತ್ತಾರೆ ಪ್ರಜ್ಞಾವಂತ ಜನಸಾಮಾನ್ಯರು.

ಕಥೆ ಇಲ್ಲಿಗೆ ಮುಗಿಯಲಿಲ್ಲ ಮತ್ತೆ ಮುಂದುವರೆಯಲಿದೆ….

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡಲು ಸ್ವಂತ ದುಡಿಮೆಯ ಹಣದಲ್ಲಿ ಪೆನ್ನು ಪುಸ್ತಕ ವಿತರಿಸಿದ-ವಿಟ್ಟು ದೋಂಡು ಪಟಕಾರೆ.

ಪ್ರತಿಧ್ವನಿ ಯಲಾಪುರ :ಇಂದಿನ ಕಾಲಮಾನದಲ್ಲಿ ದುಡಿದ ಹಣ ದುಂದು ಮಾಡಿ ಅರ್ಥಹೀನ ಕೆಲಸಗಳಲ್ಲಿ ಪೋಲು ಮಾಡುವವರ ಮದ್ಯೆ ಸಣ್ಣ ಯಲವಳ್ಳಿ …

Leave a Reply

Your email address will not be published. Required fields are marked *