Breaking News

ಹುಣಶೆಟ್ಟಿಕೊಪ್ಪದಲ್ಲಿ ಮೊಳಗಿದ ಜೈ ಭೀಮ್ ಜೈ ಭೀಮ್ – ಶ್ರದ್ಧೆಯಿಂದ ಆಚರಿಸಿದ ಡಾ,ಬಿ.ಆರ್.ಅಂಬೇಡ್ಕರ್ ಜಯಂತಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ :  ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಲ್ಲಾಪುರ ತಾಲೂಕ ಸಮಿತಿ  ವತಿಯಿಂದ ಜಿಲ್ಲಾ ಪ್ರಮುಖ ಕಲ್ಲಪ್ಪ ಹೊಳಿ ನೇತೃತ್ವದಲ್ಲಿ ಸಂವಿಧಾನ ಪಿತಾಮಹ ಡಾ,ಬಿ.ಆರ್.ಅಂಬೇಡ್ಕರ್  ಅವರ 134 ನೇ ಜಯಂತಿಯನ್ನು ಆಚರಿಸಲಾಯಿತು.


     ಸಂವಿಧಾನ ಶಿಲ್ಪಿ ಮಾನವತಾವಾದಿ ಅಂಬೇಡ್ಕರ್ ಜೀವನ ಹೋರಾಟದ ಬದುಕು ತುಳಿತಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಬದುಕು ಕೊಟ್ಟ ಮಹಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ವೇದಿಕೆ ಪ್ರಮುಖರು ಮಾತನಾಡಿದರು.


     ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಶೇಖರ್ ಸಿದ್ಧಿ ಹಿತ್ಲಳ್ಳಿ , ಜಿಲ್ಲಾ ಸಂಘಟಕ ಕಲ್ಲಪ್ಪ ಹೋಳಿ , ವಕೀಲೆ  ಅಮಿನಾ ಶೇಖ್ , ಮಹಿಳಾ ಘಟಕದ ಅಧ್ಯಕ್ಷೆ ಪ್ರೀತಿಸಿದ್ದಿ ಮಾವಿನ ಕಟ್ಟ , ಸ್ಥಳೀಯ ಘಟಕದ ಅಧ್ಯಕ್ಷ  ಪಕೀರಪ್ಪ ಸದಸ್ಯರಾದ ನಾಗೇಶ್ ಸಿದ್ದಿ , ಗಾಯತ್ರಿ ಸಿದ್ದಿ ಮುಂಡಗೋಡ ಸಂಘಟನಾ ಸಂಚಾಲಕ ಜೂಜೆ ಸಿದ್ದಿ ಹಾಗೂ ಅಗ್ನೇಲ್ ಸಿದ್ದಿ, ಸುರೇಶ್ ಸಿದ್ದಿ, ಬಸ್ತ್ಯಾಂವ್ ಸಿದ್ದಿ, ತಿಮ್ಮಣ್ಣ, ಅಜಿತ್, ಅನಸೂಯಾ, ಸಾಯಿರ ಜೂಜೆ ಸಿದ್ದಿ,  ಪದಾಧಿಕಾರಿಗಳು ಸದಸ್ಯರು ಊರಿನ  ಪ್ರಮುಖರು ನಾಗರಿಕರು ಹಾಜರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಪಂಚಾಯತ  ನಿಧಿ ಖೋತಾ – ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ – ಸೋಮೇಶ್ವರ ನಾಯ್ಕ್ ಆಗ್ರಹ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯ …

Leave a Reply

Your email address will not be published. Required fields are marked *