






ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಬಹುತೇಕ ಭಾಗಗಳಲ್ಲಿ ಹಗಲು ರಾತ್ರಿ ಎನ್ನದೆ ದೊಡ್ಡ ಗಾತ್ರದ ಕಂಟೈನರ್ ಲಾರಿಗಳು ಇನ್ನಿತರೆ ವಾಹನಗಳು ನಿಲ್ಲಿಸುವುದರಿಂದ ವಾಹನ ಸವಾರರಿಗೆ ಮತ್ತೊಂದು ಬದಿಯಲ್ಲಿ ಬರುವ ವಾಹನಗಳು ಕಾಣದೆ ಅಪಘಾತವಾಗುವ ಸಂಭವ ಹೆಚ್ಚಿದೆ.

ವಿಶೇಷವಾಗಿ ಹುಬ್ಬಳ್ಳಿ ಮಾರ್ಗದ ಟಿ.ಎಂ.ಎಸ್ ಪೆಟ್ರೋಲ್ ಪಂಪ್, ಜೋಡುಕೆರೆ ಸಮೀಪ ಸರ್ಕಾರಿ ಆಸ್ಪತ್ರೆ ಸಾಗುವ ತಿರುವು ಗಳಲ್ಲಿ ಸದಾ ವಾಹನಗಳು ನಿಂತಿದ್ದು ಎದುರು ಬರುವ ವಾಹನಗಳು ಕಾಣದೆ ಅದೆಷ್ಟೋ ಅಪಘಾತಗಳು ಸಂಭವಿಸಿವೆ ಆದರು ವಾಹನ ನಿಲ್ಲಿಸುವ ಪ್ರಕ್ರಿಯೆ ನಿಂತಿಲ್ಲ.

ರಾತ್ರಿ ವೇಳೆಯಲ್ಲಿ ಮಾತ್ರ ಅಪಘಾತ ಸಂಭವಿಸುವ ಸಾದ್ಯತೆ ಹೆಚ್ಚಿರುತ್ತದೆ ಅದರಲ್ಲು ಮಹಿಳೆಯರು ಅಥವ ಹಿರಿಯ ನಾಗರಿಕರು ದ್ವಿಚಕ್ರ ವಾಹನದಲ್ಲಿ ಸಾಗುವುದಕ್ಕೆ ಹರಸಾಹಸ ಪಡಬೇಕಿದೆ. ಈ ಕುರಿತು ಪೊಲೀಸ್ ಇಲಾಖೆ ಹೈವೆ ಪೆಟ್ರೋಲ್ ವಾಹನ ಗಂಭೀರವಾಗಿ ಗಮನಹರಿಸಿ ಪಟ್ಟಣ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಜಾಗ್ರತೆ ವಹಿಸಬೇಕಿದೆ ಇಲ್ಲವಾದಲ್ಲಿ ಈ ಸಮಸ್ಯೆಯಿಂದಲೆ ಅಪಘಾತ ಸಂಭವಿಸಿ ಪ್ರಾಣಹಾನಿಯಾದರೆ ಅದಕ್ಕೆ ನೀವೆ ಹೊಣೆಗಾರರಾಗಬೇಕಾಗಲಿದೆ ಎಂಬುದು ವಾಹನ ಸವಾರರ ಆಗ್ರಹವಾಗಿದೆ.





Prathidvani Yellapura