
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಪ್ರಾರಂಭವಾಗಿರುವ “ವೈ.ಪಿ.ಎಲ್” ಚುಟುಕು ಕ್ರಿಕೆಟ್ ಪಂದ್ಯಾವಳಿ ಸೀಸನ್ 4 ವಿದ್ಯುಕ್ತವಾಗಿ ಚಾಲನೆಯಾಗಿದ್ದು ಈ ಬಾರಿ ಒಂಬತ್ತು ತಂಡಗಳು ಕಪ್ ಈ ಬಾರಿ ನಮ್ಮದೇ ಎನ್ನುತ್ತಿವೆ.

ರವಿವಾರ ಪಟ್ಟಣದ ಪ್ರತಿಷ್ಠಿತ ಶ್ರೀರಾಮ ರೆಸಿಡೆನ್ಸಿ ಯಲ್ಲಿ “ರಾಯಲ್ ಸ್ಟ್ರೈಕಸ್೯” ತಂಡದ ನ್ಯೂ ಜೆರ್ಸಿ ಅನಾವರಣಗೊಳಿಸಲಾಯಿತು. ಯುವ ಉದ್ಯಮಿ ರಾಮನಾಥ ಡೆವಲಪಸ್೯ ಮಾಲಿಕ ಬಾಲಕೃಷ್ಣ ನಾಯಕ್ ನ್ಯೂ ಜೆರ್ಸಿ ಅನಾವರಣ ಮಾಡಿ ಆಟಗಾರರಿಗೆ ವಿತರಿಸಿ ತಂಡದ ಗೆಲುವಿಗೆ ಹಾರೈಸಿದರು.

ತಂಡದ ಮಾಲಿಕರಾದ ಮುನಾವರ್ ಅಬ್ಬಿಗೆರೆ ಮತ್ತು ನಬಿಲ್ ಶೇಖ್ ತಂಡದ ಆಟಗಾರರಿಗೆ ಗೆಲುವಿನ ಹುರುಪು ತುಂಬಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್ ಕವಡಿಕೆರೆ, ಎಂ.ಎನ್ ಭಟ್, ಶೇಖ್ ಸಲೀಂ, ಶಬ್ಬೀರ್ ಆಜಾದ, ಇಮ್ರಾನ್ ಬಾಯ್, ಇರ್ಷಾದ್ ಬಾಯ್, ಅಸ್ಗರ್ ಬಾಯ್ ಉಪಸ್ಥಿತರಿದ್ದರು.