
ಪ್ರತಿಧ್ವನಿ,ಯಲ್ಲಾಪುರ : ಬೇಸಿಗೆಯ ಜಳ ಹೆಚ್ಚಾದಂತೆಲ್ಲಾ ಎಳನೀರು, ಕಲ್ಲಂಗಡಿ, ಕಬ್ಬಿನಹಾಲು, ಮಜ್ಜಿಗೆ, ಎಳ್ಳುನೀರು, ಶರಬತ್ತು ಹಾಗೂ ಇನ್ನಿತರೆ ದಾಹ ನೀಗುವ ಪಾನೀಯಗಳ ಬೇಡಿಕೆ ಹೆಚ್ಚಿದ್ದು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಿಂಬೆ ಹಣ್ಣಿನ ದರ ದಿಡೀರನೆ ಹೆಚ್ಚಾಗಿದ್ದು ಒಂದು ನಿಂಬೆಹಣ್ಣಿಗೆ ೧೦ರೂ ವರೆಗೂ ಏರಿಕೆ ಕಂಡಿದೆ.


ಬೇಸಿಗೆಯ ಸಮಯದಲ್ಲಿ ಪೆಪ್ಸಿ, ಕೋಕೋಕೋಲಾದಂತಹ ಪಾನೀಯಗಳಿಗೆ ಮೊರೆ ಹೋಗುವ ಮಂದಿ ಕಡಿಮೆಯಾಗುತ್ತಿದ್ದು ದೇಸೀ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಉಳ್ಳವರು ಬೆಲೆ ಹೆಚ್ಚಾದರೂ ಎಳನೀರನ್ನೇ ಹೆಚ್ಚಾಗಿ ಬಳಸುತ್ತಿದ್ದು ಕಡಿಮೆ ದರದಲ್ಲಿ ನಿಂಬೂಪಾನಿ, ಶರಬತ್ತು , ನಿಂಬೂಸೋಡಾ ಬಳಸುತ್ತಿದ್ದ ಜನರಿಗೆ ನಿಂಬೆಹಣ್ಣಿನ ದರ ಏರಿಕೆಯಾಗಿರುವುದರಿಂದ ನಿಂಬೆಹಣ್ಣಿನಿಂದ ತಯಾರಾಗುವ ಎಲ್ಲಾ ಪಾನೀಯಗಳ ಬೆಲೆಯ ಬಿಸಿಯೂ ತಟ್ಟಿದೆ.

ಅಂತೂ ತನಗೊಂದು ಸುವರ್ಣಕಾಲ ಬಂದಿದೆ ಎಂದು ರೂಪಾಯಿಗೊಂದರಂತೆ ಬಿಕರಿಯಾಗುತ್ತಿದ್ದ ಬಂಗಾರದ ಬಣ್ಣದ ನಿಂಬೆಹಣ್ಣು 1೦ ರೂ ಗೆ ಏರಿಕೆಯಾಗಿದ್ದು ಬಂಗಾರದ ಬೆಲೆಯೂ ಬಂದಂತಾಗಿದೆ.





Prathidvani Yellapura