
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಅರಣ್ಯ ರಕ್ಷಣೆ, ಪೋಷಣೆಯೊಂದಿಗೆ ರೈತಾಪಿ ವರ್ಗದವರಲ್ಲಿ ಕಾಡು ಬೆಳೆಸುವ ಜಾಗೃತಿ ಮೂಡಿಸುವ ಸಲುವಾಗಿ ರಿಯಾಯಿತಿ ದರದಲ್ಲಿ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ.

ರವಿವಾರ ತಾಲೂಕಿನ ಕಿರವತ್ತಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಯಲ್ಲಾಪುರ ಉಪ ವಿಭಾಗ ರವರ ನೇತೃತ್ವದಲ್ಲಿ ಸಸ್ಯಸಂತೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.


ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪರೀಕ್ಷಾರ್ಥ ಕಿರವತ್ತಿ ವಲಯ ಮತ್ತು ಕಿರವತ್ತಿ ವಲಯದ ಎಲ್ಲಾ ಸಿಬ್ಬಂದಿಗಳಬಸಹಕಾರದಲ್ಲಿ ಕಿರವತ್ತಿ ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡುವುದರ ಮೂಲಕ ಸಸ್ಯ ಸಂತೆ ಕಾರ್ಯಕ್ರಮ ನೆರವೇರಿಸಲಾಯಿತು.

Prathidvani Yellapura