
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕ್ರಿ.ಶ ೧೬೫೦ರಲ್ಲಿ ಛತ್ರಪತಿ ಶಿವಾಜಿ ಮಹಾರಾಜನ ಸೈನ್ಯದಲ್ಲಿದ್ದ ನಮ್ಮ ಹಿಂದೂ ಸಮಾಜಕ್ಕೆ ಮತ್ತು ನಮ್ಮ ಧರ್ಮದವರು ಪೂಜಿಸಲೆಂದೇ ಋಷಿಮುನಿಗಳಿಂದ ದೇವಿಯ ವಿಗ್ರಹವನ್ನು ಬಳುವಳಿಯಾಗಿ ನೀಡಿದ್ದು ಇತಿಹಾಸ.

ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸರ್ವ ಸಮಾಜದ ಬಂಧುಗಳ ಸಹಕಾರದೊಂದಿಗೆ ಭುವನೇಶ್ವರಿ ದೇವಿಯ ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು 25 ಲಕ್ಷಕ್ಕೂ ಅಧಿಕ ಮೊತ್ತವನ್ನು ಅಂದಾಜಿಸಲಾಗಿದೆ. ಈ ಮಹಾ ಸಾಹಸ ಕಾರ್ಯಕ್ಕೆ ಭಕ್ತ ಜನರು ತನು-ಮನ-ಧನ ಸಹಾಯಗಳಿಂದ ಸಹಕರಿಸಬೇಕೆಂದು ಭುವನೇಶ್ವರಿ ದೇವಿ ದೇವಸ್ಥಾನ ಸಮಿತಿ ಪತ್ರಿಕಾ ಹೇಳಿಕೆಯೊಂದಿಗೆ ಕೋರಿಕೆ ಸಲ್ಲಿಸಿದೆ.

ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ ವೆಚ್ಛ ಅಂದಾಜಿಸಲಾಗಿದ್ದು ವಿವಿಧ ರೂಪದಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ವಿವರವುಳ್ಳ ಪತ್ರಿಕೆಯನ್ನು ಯಲ್ಲಾಪುರದ ಶಕ್ತಿಪೀಠ ಗ್ರಾಮದೇವಿ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಈಶ್ವರ ಪರಶುರಾಮ ಪಾಟಣಕರ, ಅಧ್ಯಕ್ಷೆ ಶಾಮಿಲಿ ಪ್ರಭು ಪಾಟಣಕರ, ಉಪಾಧ್ಯಕ್ಷ ಸುರೇಶ ಬೋರಕರ, ಕಾರ್ಯದರ್ಶಿ ಘನಶ್ಯಾಮ ಮೋಹನ ರೇವಣಕರ, ಖಜಾಂಚಿ ಅಶೋಕ ಜಯರಾಮ ಪಾಟಣಕರ, ಸದಸ್ಯರಾದ ಗಣಪತಿ ಪಾಟಣಕರ, ಚಂದರಾಜ ಪಾಟಣಕರ, ಸ್ವಸ್ತಿಕ್ ಪಾಟಣಕರ, ವಿಜಯಲಕ್ಷ್ಮಿ ವಿಶ್ವನಾಥ ಪಾಟಣಕರ, ವಿಶ್ವನಾಥ ಪಾಟಣಕರ, ಪೂರ್ಣಿಮಾ ಅಶೋಕ ಪಾಟಣಕರ, ಪೂಜಾ ನೇತ್ರೇಕರ, ಸುನಂದಾ ಪಾಟಣಕರ, ಸುರೇಂದ್ರ ಮುರ್ಕುಂಬಿ ಉಪಸ್ಥಿತರಿದ್ದರು.

Prathidvani Yellapura