
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಸೆ,28 ರ ಗುರುವಾರದಂದು ಮುಸ್ಲಿಂ ಸಮೂದಾಯದ ಈದ್-ಮಿಲಾದ್ ಆಚರಣೆ ಸಂದರ್ಭದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ ಸಂಭ್ರಮಿಸದ್ದರು. ಈ ನಡುವೆ ಮೆರವಣಿಗೆಯಲ್ಲಿ ಭಾರತದ ರಾಷ್ಟ್ರ ಧ್ವಜದ ಮಾದರಿಯಲ್ಲಿ ಮದ್ಯದ ಬಿಳಿ ಬಣ್ಣದ ಭಾಗದಲ್ಲಿ ಮುಸ್ಲಿಂ ಸಮೂದಾಯದ ಗುರುತನ್ನಿಟ್ಟು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ.
ಈ ಸಂಬಂದ ಯಲ್ಲಾಪುರ ಠಾಣೆಯಲ್ಲಿ ಸ್ವಯಂ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿರುವುದಾಗಿ ತಿಳಿದು ಬಂದಿದೆ.
ಒಂದೆಡೆ ಗಣಪತಿ ಹಬ್ಬದ ಸಡಗರ ಮತ್ತೊಂದು ಕಡೆ ಮುಸ್ಲಿಂ ಸಮುದಾಯದ ಈದ್ ಆಚರಣೆ ನಡುವೆ ರಾಷ್ಟ್ರ ಧ್ಜಜಕ್ಕೆ ಅಪಮಾನ ಪ್ರಕರಣ ನಡೆದಿದ್ದು ದುರದೃಷ್ಟಕರ
ಒಂದು ಮೂಲದ ಪ್ರಕಾರ ರಾಷ್ಟ್ರ ಧ್ವಜವನ್ನು ವಶಕ್ಕೆ ಪಡೆದಿದ್ದು ಅದರಲ್ಲಿ ಬಿಳಿ ಬಣ್ಣದ ಭಾಗದಲ್ಲಿ ಅರ್ಧ ಚಂದ್ರಾಕೃತಿಯನ್ನು ಅಳವಡಿಸಿರುವುದಾಗಿ ತಿಳಿದು ಬಂದಿದೆ.




Prathidvani Yellapura