Breaking News

ಗಣಪತಿ ಸಂಭ್ರಮಕ್ಕು ಸಮಯದ ಕೊರತೆ. ಸಿದ್ದಗೊಂಡ ಮಂಟಪ ಅದಕ್ಕಾಗಿ ಬಂತೇ..??

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಚೌತಿ ಗಣಪನ ಹಬ್ಬಕ್ಕೆ ದಿನಗಣನೆ ಆರಂಭವಾಗುತತಿದ್ದಂತೆ ಗಜಮುಖನ ಆಹ್ವಾನಕ್ಕೆ ಸಕಲ ತಯಾರಿಗಳ ಸಿದ್ಧತೆ, ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಗೆ ಬಂದಿದ್ದು ಯಲ್ಲಾಪುರದ ರವಿವಾರ ಸಂತೆಯಲ್ಲಿ ಗಣೇಶನನ್ನು ಕೂರಿಸುವ ರೆಡಿಮೇಡ್ ಮಂಟಪಗಳ ಮಾರಾಟ ಎಲ್ಲರ ಗಮನ ಸೆಳೆಯಿತು.


ಹಳಿಯಾಳ ಮೂಲದ ಪ್ರಶಾಂತ ಎಂಬಾತ ಧಾರವಾಡದಲ್ಲಿ ಪೂಜಾ ಮಂಟಪಗಳ ಬಾಡಿಗೆ ನೀಡುವ, ಮಾರಾಟ ಮಾಡುವವನಾಗಿದ್ದು ಕಳೆದ ಮೂರು ವರ್ಷಗಳಿಂದ ಪೂಜಾ ಕಾರ್ಯಗಳಿಗೆ ಬಟ್ಟೆಯಲ್ಲಿ ಸಿದ್ಧಪಡಿಸಿದ ಅಲಂಕಾರಿಕ ಮಂಟಪ ಮಾರುತ್ತಿದ್ದಾನೆ. ಇದೇ ಮೊದಲ ಬಾರಿಗೆ ಯಲ್ಲಾಪುರ ಮಾರುಕಟ್ಟೆಗೆ ಬಂದಿದ್ದು ಜನರಿಗೆ ಇದರ ವಿಶೇಷತೆ ಹೇಳುವುದರಲ್ಲೇ ದಿನಕಳೆದಂತಾಗಿದೆ. ಇನ್ನು ಮುಂದಷ್ಟೇ ಮಾರಾಟ ಶುರುವಾಗಬೇಕಿದೆ ಎನ್ನುತ್ತಾನೆ ಪ್ರಶಾಂತ.


ಹಿಂದೆಲ್ಲಾ ಚೌತಿ ಗಣಪನ ಸಂಭ್ರಮಕ್ಕೆ ಮನೆಗಳಲ್ಲಿ ಅಥವಾ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣಪತಿಯ ಮಂಟಪ ಮಕ್ಕಳು, ಯುವಕರು ಅತ್ಯುತ್ಸಾಹದಿಂದ ರಾತ್ರಿ ಎಲ್ಲಾ ನಿದ್ರೆ ಬಿಟ್ಟು ತಯಾರಿಸುತ್ತಿದ್ದರು. ಕಾಲ ಬದಲಾದಂತೆಲ್ಲಾ ಪದ್ಧತಿಗಳೂ ಬದಲಾಗುತ್ತಿದ್ದು ತಳಿರು-ತೋರಣಗಳು, ಫಲ-ಪುಷ್ಪಗಳು, ಬಾಳೆದಿಂಡಿನಿಂದ ತಯಾರಾಗುತ್ತಿದ್ದ ಮಂಟಪಗಳು ಮಾಯವಾಗಿ ರೆಡಿಮೇಡ್ ಮಂಟಪಗಳ ಕಾಲ ಬಂದಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *