

ಪ್ರತಿಧ್ವನಿ,ಯಲ್ಲಾಪುರ : ಅಧಿಕಾರಿಗಳು ಹಾಜರಿರದ ಕಾರಣ ಮುಂದೂಡಲಾಗಿದ್ದ ಕಂಪ್ಲಿ ಗ್ರಾಮಸಭೆಯು ಸೋಮವಾರ ಮದ್ಯಾಹ್ನ 3 ಗಂಟೆಗೆ ಗ್ರಾ.ಪಂ ಆವಾರದಲ್ಲಿ ನಡೆಯಿತು.
ಈ ಹಿಂದೆ ನಿಗಧಿಯಾಗಿದ್ದ ಕಂಪ್ಲಿ ಗ್ರಾಮಸಭೆಗೆ ವಿವಿಧ ಇಲಾಖೆಗಳ ಕೆಲವು ಪ್ರಮುಖ ಅಧಿಕಾರಿಗಳು ಗೈರಾದ ಕಾರಣ ಸಭೆ ಮುಂದೂಡಲಾಗಿ ಜಿಲ್ಲೆಯಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಆ.5 ರಂದು ನಡೆದ ಕೆಡಿಪಿ ಸಭೆಯಲ್ಲೂ ಸಹ ಈ ವಿಷಯ ಮಾರ್ದನಿಸಿತ್ತು. ಈ ಹಿನ್ನಲೆಯಲ್ಲಿ ಆ.7 ರ ಸೋಮವಾರದಂದು ನಿಗಧಿಯಾಗಿದ್ದ ಸಭೆ ಕೊಂಚ ಗಂಭಿರವಾಗಿ ಎಲ್ಲಾ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.

ಕೆಲವು ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಿ ಉಪಯುಕ್ತ ಸಲಹೆ ಸೂಚನೆಗಳು ಹೊರಮೂಡಿದವು. ವಿದ್ಯುತ್ ಸಮಸ್ಯೆ, ಹೊಸ ಬಸ್ನಿಲ್ದಾಣ ನಿರ್ಮಾಣ, ಸ್ವಚ್ಛತೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಠರಾವು ಹೊರಡಿಸಲಾಗಿ ಗ್ರಾಮಸಭೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯ ಕಂಡಿತು.






Prathidvani Yellapura