


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ವಿವಿಧ ಅಂಗಡಿಗಳು ಹಾಗು ಹೊಟೆಲ್ ಗಳ ಮೇಲೆ ಪಟ್ಟಣ ಪಂಚಾಯತ ಸಿಬ್ಬಂದಿಗಳು ದಾಳಿ ಮಾಡಿ ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲದೆ ನಿಷೇದಿಸಿರುವ ಅನಧಿಕೃತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳಿಗೆ ದಂಡವಿಧಿಸಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.

ಪಟ್ಟಣದ ಒಟ್ಟು 12 ಅಂಗಡಿ ಹೊಟೆಲ್ ಮೇಲೆ ದಾಳಿ ಮಾಡಿ 6,600 ರುಪಾಯಿ ದಂಡ ವಸೂಲಿ ಮಾಡಿ ಸುಮಾರು 13 ಕೆ.ಜಿ 350 ಗ್ರಾಂ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಶಕ್ಕೆ ಪಡೆದು ಮುಂದೆ ಬಳಸದಂತೆ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರು ಗಡಗಿ , ಸ್ವಚ್ಚತಾ ಮೇಲ್ವಿಚಾರಕ ವಿಜಯ್ ಶಿರಾಲಿ , ಪೌರಕಾರ್ಮಿಕರಾದ ವಿಜಯ ಕುಮಾರ್ ಮಾದರ್, ಸುರೇಶ್ ಮಾದರ್, ಮಹಮ್ಮದ್ ರಫಿಕ್ ದಾಳಿ ನಡೆಸಿದ ತಂಡದಲ್ಲಿದ್ದರು.







Prathidvani Yellapura