

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಯಲ್ಲಾಪುರ
ಪ್ರತಿಧ್ವನಿ,ಯಲ್ಲಾಪರ : ಮನೆಯಲ್ಲಿನ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗಬೇಕಿದೆ ಆಗ ಜ್ಞಾನಾರ್ಜನೆಯ ಶಿಕ್ಷಣದೊಂದಿಗೆ ಸಂಸ್ಕಾರವಂತ ಪ್ರಜೆಗಳಾಗಿ ಹೊರಹೊಮ್ಮುವಂತಾಗಲಿದೆ. ಸರ್ಕಾರಿ ನೌಕರರು ತಮ್ಮ ವೃತ್ತಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವಂತಹ ಸೇವೆ ಜನತೆಗೆ ದೊರಕಿಸಿಕೊಡಬೇಕಿದೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ನನ್ನ ಪ್ರಯತ್ನದೊಂದಿಗೆ ಸಾಕಾರಗೊಳಿಸುತ್ತೇನೆ. ರಾಜಕೀಯ ವಿಪ್ಲವಗಳು ಪ್ರತಿ ಚುನಾವಣೆಯಲ್ಲಿ ಹೊಸ ಪಾಠವನ್ನು ಪರಿಚಯಿಸುತ್ತಲೆ ಸಾಗುತ್ತದೆ. ಅದನ್ನು ಸ್ಪೂರ್ತಿ ರೂಪದಲ್ಲಿ ಸ್ವೀಕರಿಸಬೇಕಿದೆ. ನಿಮ್ಮ ಗೌರವದ ಸನ್ಮಾನ ಸಂತಸದೊಂದಿಗೆ ಜವಾಬ್ದಾರಿಯನ್ನು ಹೆಚ್ಚಾಗಿಸಿದೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೊಂದಿಗೆ ಸ್ನೇಹಮಯವಾಗಿ ವ್ಯವಹರಿಸಿ ಅಭಿವೃದ್ಧಿ ಕಾರ್ಯ ಮುಂದುವರೆಸಲಿದ್ದೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಅರಣ್ಯ ಇಲಾಖೆಯ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸಾಧಾರಣ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈವಾನುಗ್ರಹದಿಂದ ತಾಲೂಕಿಗೆ ಬಂದಿರುವ ಎಲ್ಲಾ ಸರ್ಕಾರಿ ನೌಕರರು ಊರಿನ ಪ್ರಗತಿಯಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ ಅಲ್ಲದೆ ಯಾರು ಸಹ ಸಾರ್ವಜನಿಕರೊಂದಿಗೆ ಬೇಜವಬ್ದಾರಿಯಿಂದ ನಡೆದುಕೊಳ್ಳದೆ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸುತ್ತಾರೆ ಅವರ ಇಂತಹ ಸೇವೆಗೆ ಶ್ಲಾಘಿಸುತ್ತೇನೆ ಮತ್ತು ಶಾಸಕರು ತರುವ ಎಲ್ಲಾ ಅಬಿವೃದ್ದಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನ ಗೊಳಿಸಿದ್ದು ಸಹ ಇತ್ತೀಚಿನ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಗೆಲುವಿಗೆ ಸಹಕಾರಿಯಾಗಿದೆ ಹಾಗು ಶಾಸಕರನ್ನು ಅಭಿನಂದಿಸಿದ್ದು ಪ್ರತಿಭ ಪುರಸ್ಕಾರ ನಡೆಸಿದ್ದು ಅತ್ಯಂತ ಉತ್ತಮವಾಗಿದೆ ಎಂದು ರಾ.ವಿ.ಯೋ.ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಹೇಳಿದರು.


ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ಸೇವೆಯಲ್ಲಿರುವ ನೌಕರರ 41 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.

ಸತತ ನಾಲ್ಕನೆ ಬಾರಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಅವರನ್ನು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್, ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಾಯಣ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಆರ್.ಭಟ್, ಯಲ್ಲಾಪುರ ವಲಯ ಅರಣ್ಯಾಧಿಕಾರಿ ಎಲ್.ಏ.ಮಠ , ದೈ.ಶಿ.ಸಂ.ಅಧ್ಯಕ್ಷ ನಾರಾಯಣ್ ನಾಯ್ಕ್ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಮ್.ಭಟ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಪ್ರಜ್ವಲ್ ತಳೇಕರ್ ಪ್ರಾರ್ಥಿಸಿದನು. ಸುಭಾಷ್ ಆರ್ ನಾಯ್ಕ್ ಸ್ವಾಗತಿಸಿದರು. ಸಂಜೀವ್ ಹೊಸ್ಕೇರಿ ನಿರೂಪಿಸಿ ವಂದಿಸಿದರು.
ನಂತರದಲ್ಲಿ ಸಂಘದ ಸರ್ವ ಸಾಧಾರಣ ಸಭೆ ಜರುಗಿತು.

Prathidvani Yellapura