
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಸರ್ಕಾರದ್ದು ಎಂದ ಕೂಡಲೇ ಆಲಸ್ಯ, ನಿರ್ಲಕ್ಷ್ಯ ಬೇಜವಾಬ್ದಾರಿ ಮತ್ತು ನನ್ನದಲ್ಲ ಎಂಬ ಭಾವ ಅದೇಕೋ ಬಹುಸಮಯದಿಂದ ಕೆಲವು ಇಲಾಖೆ ಮತ್ತು ಅಧಿಕಾರಿಗಳ ತಲೆಯಲ್ಲಿ ತುಂಬಿಬಿಟ್ಟಿದೆ. ಅದಕ್ಕೆ ತಾಜಾ ಉದಾಹರಣೆ; ಯಲ್ಲಾಪುರದ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿರುವ ಉಪ ಖಜಾನೆ ಕಚೇರಿಯ ನಾಮಫಲಕ ಬಹು ಸಮಯದಿಂದ ಮುರಿದು ಬಿದ್ದಿದ್ದು ಪ್ರತಿ ನಿತ್ಯ ಅದೇ ಕಚೇರಿ ಸಂಬಧಿಸಿದ ಅಧಿಕಾರಿಗಳು, ಸಿಬ್ಬಂದಿ ವರ್ಗ ಕಣ್ಣಾರೆ ನೋಡಿ ಸುಮ್ಮನಿರುತ್ತಾರೆಯೇ ವಿನಃ ದುರಸ್ಥಿ ಮಾಡುವ ಅಥವಾ ಮಾಡಿಸುವ ಕಡೆ ಗಮನವೇ ಹರಿಸಿಲ್ಲ ಎಂಬುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವಿಷಯ ಸಣ್ಣದಾದರೂ ಒಳಗಿನ ಅರ್ಥ ವಿಸ್ತಾರವಾಗಿದೆ. ಯಾವುದೇ ವ್ಯಕ್ತಿ ತಮ್ಮ ಸ್ವಂತ ಮನೆಯ ಬೇಲಿಯ ಗೂಟ ಬಿದ್ದರೂ ಒಂದೇ ದಿನದಲ್ಲಿ ನಿಂತು ಸರಿಪಡಿಸುತ್ತಾನೆ. ಅದು ನನ್ನದು ಎಂಬ ಭಾವವಿರುವುದರಿಂದ . ಅದೇ ಸರ್ಕಾರದ ವ್ಯವಸ್ಥೆಯಲ್ಲಿ ಇಂತಹದೊAದು ಘಟನೆ ನಡೆದರೆ ಮೇಲಿನ ಎಲ್ಲ ಪದಗಳೂ ಅನ್ವಯಿಸುತ್ತದೆ. ಆಲಸ್ಯ, ನಿರ್ಲಕ್ಷ ಬೇಜವಾಬ್ದಾರಿ ಮತ್ತು ನನ್ನದಲ್ಲ ಎಂಬ ಭಾವ. ಇಂತಹ ಮನಸ್ಥಿತಿಯಿಂದ ಸಾರ್ವಜನಿಕರಾಗಲೀ, ಸರ್ಕಾರಿ ಅಧಿಕಾರಿ ಸಿಬ್ಬಂದಿಗಳಾಗಲ;ಈ ಹೊರಬರಬೇಕಿದೆ. ಎಲ್ಲವೂ ನಮ್ಮದೇ ಎಂಬ ಭಾವವಿದ್ದರೆ ಬಿದ್ದಿರುವ ಉಪಖಜಾನೆಯ ಫಲಕ ಎಂದೋ ಸರಿಯಾಗುತ್ತಿತ್ತು.
ಸಂಬಂಧಿಸಿದ ಕಚೇರಿಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಫಲಕ ಸರಿಪಡಿಸಬೇಕಿದೆ. ಇಲ್ಲವಾದಲ್ಲಿ ನಿಮಗೆ ವೃತ್ತಿ ನೀಡಿ ಅನ್ನ ನೀಡುತ್ತಿರುವ ಇಲಾಖೆಯ ಸ್ವತ್ತನ್ನು ಮತ್ತು ಘನತೆಗೆ ಧಕ್ಕೆ ತಂದರೆ ಅರ್ಥವಿಲ್ಲದಂತಾಗಲಿದೆ ಎಂಬುದು ಪ್ರತಿನಿತ್ಯ ಫಲಕವನ್ನು ನೋಡುತ್ತಿರುವ ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವಾಗಿದೆ.





Prathidvani Yellapura