
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕೋಳಿಕೇರಿ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಪಟ್ಟಣದ ರವೀಂದ್ರನಗರ ನಿವಾಸಿ ಹನುಮಂತ ತಿಮ್ಮಣ್ಣ ಭೋವಿವಡ್ಡರ್ (18) ಎಂಬಾತನೇ ಮೃತ ಯುವಕನಾಗಿದ್ದು ಶಿಗ್ಗಾವಿ ಮೂಲದ ಫಕೀರೇಶ್ ಹನುಮಂತಪ್ಪ ದೊಡ್ಡಮನಿ ಎಂಬ ಯುವಕನ ಸ್ಥಿತಿ ಗಂಭಿರವಾಗಿದ್ದು ಹುಬ್ಬಳ್ಳಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.


ಹುಬ್ಬಳೀ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಕಬ್ಬಿಣದ ಸಾಮಗ್ರಿ ತುಂಬಿದ್ದ ಲಾರಿಗೂ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Prathidvani Yellapura