Breaking News

ರಾತ್ರೋರಾತ್ರಿ ಅಂಗಡಿ ಡಬ್ಬಿ ತೆರವು ಪ.ಪಂ ಇಬ್ಬಗೆಯ ನೀತಿ ವಿರುದ್ದ ಕಾಂಗ್ರೆಸ್ ಆಕ್ರೋಶ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಹು ವರ್ಷಗಳಿಂದ ಜೀವನ ನಿರ್ವಹಣೆಗಾಗಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸ್ನೇಹಿತರಿಬ್ಬರು ಅಂಗಡಿವ್ಯವಹಾರ ನಡೆಸಿಕೊಂಡು ಬರುತ್ತಿದ್ದು ಮಳೆಗಾಲದ ಸಂದರ್ಭದಲ್ಲಿ ಸಾಮಾಗ್ರಿಗಳು ನೆಂದು ಹಾಳಗಬಾರದೆಂದು ತಗಡಿನ ಡಬ್ಬಿ ಇಟ್ಟಿದ್ದು ಇದನ್ನು ಅಂಗಡಿ ಮಾಲಿಕರ ಗಮನಕ್ಕೆ ಬಾರದಂತೆ ರಾತ್ರೋರಾತ್ರಿ ಪಟ್ಟಣ ಪಂಚಾಯತ ಸಿಬ್ಬಂದಿಗಳು ಕಳ್ಳ ಮಾರ್ಗದಲ್ಲಿ ತೆರವುಗೊಳಿಸಿರುತ್ತಾರೆ.


ಇಂತಹ ಸಣ್ಣತನವನ್ನು ಖಂಡಿಸುವುದಲ್ಲದೆ ಇದೇ ವೃತ್ತದಲ್ಲಿ ಹಲವು ಅಂಗಡಿಗಳು ಪಟ್ಟಣ ಪಂಚಾಯತ ಜಾಗದಲ್ಲಿ ಅನದಿಕೃತವಾಗಿ ನಡೆಸುತ್ತ ಜೀವನ ಸಾಗಿಸುತ್ತಿದ್ದು ಆ ಅಂಗಡಿಗಳನ್ನು ತೆರವುಗೊಳಿಸದೆ ಕೇವಲ ದಲಿತ ಮತ್ತು ಅಲ್ಪಸಂಖ್ಯಾತ ಅಂಗಡಿಯನ್ನು ತೆರವುಗೊಳಿಸಿ ಇಬ್ಬಗೆಯ ನೀತಿ ಅನುಸರಿಸುತ್ತಿರುವ ಯಲ್ಲಾಪುರ ಪಟ್ಟಣ ಪಂಚಾಯತ ನಡೆಯನ್ನು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಬಲವಾಗಿ ಖಂಡಿಸುತ್ತಲ್ಲದೆ ಹೋರಾಟದ ಎಚ್ಚರಿಕೆ ನೀಡುತ್ತದೆ. ಎಂದು ಕಾಂಗ್ರೆಸ್ ಸೆಲ್ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ರವಿ ಇಂಜಿನಿಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ಪಟ್ಟಣ ಅತ್ಯಂತ ಸಣ್ಣದಾದ ವ್ಯಾಪ್ತಿ ಹೊಂದಿದೆ ಇಲ್ಲಿ ಸ್ಥಳದ ಕೊರತೆ ಇದೆ ಹೊಟ್ಟೆ ಪಾಡಿಗೆ ರಸ್ತೆ ಬದಿಯಲ್ಲಿ ಜೀವನ ನಿರ್ವಹಣೆಗೆ ಗೂಡಂಗಡಿ ನಡೆಸುತ್ತಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದನ್ನು ಬಿಟ್ಟು ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.


ಸಾರ್ವಜನಿಕ ಸಂಚಾರಕ್ಕೆ ತೊಂದರೆ ಸರ್ಕಾರಿ ಜಾಗ ಅತಿಕ್ರಮಣ ಎನ್ನುವ ಕಾರಣಗಳಿಂದ ಅಂಗಡಿಗಳನ್ನು ತೆರವುಗೊಳಿಸುವುದೆ ಆದರೆ ಪಟ್ಟಣ ವ್ಯಾಪ್ತಿಯ ಎಲ್ಲಾ ಅನದಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕಿದೆ ಇಲ್ಲವಾದಲ್ಲಿ ಎಲ್ಲರಿಗು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ಹಲವರ ಅಭಿಪ್ರಾಯವಾಗಿದೆ.
ಈ ಸಂಬಂಧ ಕಾಂಗ್ರೆಸ್ ಪಕ್ಷದ ಪ್ರಮುಖರು ಪಟ್ಟಣ ಪಂಚಾಯತ ಸದಸ್ಯರಾದ ನರ್ಮದಾ ನಾಯ್ಕ್, ಕೈಸರ್ ಸೈಯದ್ ಹಾಗು ಇನ್ನಿತರರು ಪಟ್ಟಣ ಪಂಚಾಯತ್ ಆವಾರದಲ್ಲಿ ಅಂಗಡಿ ಡಬ್ಬಿ ಕಿತ್ತು ತಂದು ಗುಡ್ಡೆ ಹಾಕಿರುವುದನ್ನು ಕಂಡು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಮೊದಲಿನಿಂದಲು ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲಿ ಮಳೆ ರಕ್ಷಣೆಗಾಗಿ ಸಾಲಸೂಲ ಮಾಡಿ ಕಬ್ಬಿಣದ ಶೆಡ್ ನಿರ್ಮಿಸಿಕೊಂಡಿದ್ದೆ ಆದರೆ ವ್ಯಾಪಾರ ಆರಂಭಿಸುವ ಮುನ್ನವೆ ಈ ರೀತಿ ಕಿತ್ತು ಹಾಕಿ ನಮ್ಮ ಹೊಟ್ಟೆಮೇಲೆ ಹೊಡೆದು ಅನ್ಯಾಯ ಮಾಡಿದ್ದಾರೆ. ನನ್ನ ಜೊತೆಯಲ್ಲಿ ಮತ್ತೊಬ್ಬ ನನ್ನ ಸ್ನೇಹಿತ ವೆಂಕಟೇಶ ಹನುಮಂತ ಕಾನಡೆ ಎಂಬಾತ ಕುಡಿತದ ಚಟವನೆಲ್ಲಾ ಬಿಟ್ಟು ಅಂಗಡಿ ನಡೆಸಿ ಜೀವನ ನಿವ೯ಹಣೆ ಮಾಡುತ್ತಿರುವವನಿಗೆ ಈ ಘಟನೆಯಿಂದ ಆಘಾತವಾಗಿದ್ದು ಆಸ್ಪತ್ರೆ ಸೇರಿದ್ದಾನೆ. ಯಾವುದೆ ಮುನ್ಸೂಚನೆ ಇಲ್ಲದೆ ಏಕಾಏಕಿ ರಾತ್ರಿ ವೇಳೆಯಲ್ಲಿ ಕಳ್ಳರಂತೆ ಅಂಗಡಿ ತೆರವುಗೊಳಿಸಿರುವದು ಅಮಾನವೀಯ ನಮಗೆ ನ್ಯಾಯಬೇಕಿದೆ.
ಅಬ್ದುಲ್ ರೆಹಮಾನ್ ಟಿ.ಪಿ
ಅಂಗಡಿಕಾರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *