

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಆಧಾರ್ ಕಾರ್ಡ್ ಮೇಳ ಆಯೋಜಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಈ ಮೇಳದ ಕುರಿತು ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ಪ್ರಚಾರ ನಡೆದ ಹಿನ್ನೆಲೆಯಲ್ಲಿ ಪಟ್ಟಣದ ಶಿರಸಿ ರಸ್ತೆ ಯಲ್ಲಿರುವ ಅಂಚೆ ಇಲಾಖೆ ಮುಂಬಾಗ ಜನಸಾಗರದಿಂದ ತುಂಬಿಹೋಗಿತ್ತು.

ದೇಶದ ಪ್ರಜೆಗಳ ಅತಿ ಪ್ರಾಮುಖ್ಯ ಗುರುತಿನ ಪತ್ರ ಆಧಾರ್ ಕಾರ್ಡ್ ನಿತ್ಯ ಜೀವನದ ಎಲ್ಲಾ ಕೆಲಸ ಕಾರ್ಯಗಳಿಗೆ ಪ್ರಾಮುಖ್ಯತೆ ಪಡೆದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಅದರಲ್ಲಿನ ಕೆಲವು ನ್ಯೂನ್ಯತೆ ಸರಿಪಡಿಸಲು, ದೂರವಾಣಿ ಸಂಖ್ಯೆ ಬದಲಿಸಲು, ವಿಳಾಸ ಬದಲವಣೆ, ಮಕ್ಕಳಿಗೆ ಹೊಸ ಆಧಾರ್ ಕಾರ್ಡ್ ಮಾಡಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ಮೇಳ ಅನುಕೂಲಕರವಾಗಿತ್ತು.

ಜೂನ್ 8,9,10 ಮೂರು ದಿನಗಳ ಕಾಲ ಮೇಳ ನಡೆಯುತ್ತಿದ್ದು ಪ್ರತಿನಿತ್ಯ ಕನಿಷ್ಠ 160 ಜನರ ಆಧಾರ್ ಸಮಸ್ಯೆ ಬಗೆಹರಿಸುವ ಗುರಿ ಹೊಂದಲಾಗಿದೆ. ಅಂಚೆ ಕಚೇರಿಯಲ್ಲಿ ಇದಕ್ಕಾಗಿ 4 ಮಂದಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸ್ಪಂಧಿಸುತ್ತಾರೆಂದು ಅಂದುಕೊಂಡಿರಲಿಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಳ ಮುಗಿದ ನಂತರವು ಮೇಲಾಧಿಕಾರಿಗಳಿಗೆ ಮನವಿ ಮಾಡಿ ಮತ್ತಷ್ಟು ದಿನ ಮುಂದುವರೆಸಲು ಕೋರಲಾಗುವುದು – ಸುಶಾಂತ್ ಡಿ ಭಂಡಾರಿ, ಆಧಾರ್ ಕಾಡ್೯ ಅಧಿಕಾರಿ





Prathidvani Yellapura