
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕಳೆದ ಸಾಲಿನ ಹವಮಾನ ಆಧಾರಿತ ಬೆಳೆ ವಿಮೆ ತಾಂತ್ರಿಕ ಕಾರಣಗಳಿಂದಾಗಿ ರೈತರ ಕೈ ಸೇರದೆ ಗಗನ ಕುಸುಮವಾಗಿತ್ತು. ಬೆಳೆ ವಿಮೆ ಪಡೆಯುವುದು ಕನಸಿನ ಮಾತು ಎನ್ನುವಷ್ಟರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ದ ಫಲ ಮತ್ತು ಶಾಸಕ ಶಿವರಾಮ ಹೆಬ್ಬಾರ್ ಅವರ ಮುತುವರ್ಜಿ ಮರೆತೆ ಹೋಗಿದ್ದ ಬೆಳೆ ವಿಮೆ ಪಡೆದಂತಾಗಿದೆ. ಇಂತಹ ಸಾರ್ಥಕ ಕಾರ್ಯಕ್ಕೆ ರೈತರು,ಸಹಕಾರಿ ಸಂಘ ಸಂಸ್ಥೆಗಳು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸಹ್ಯಾದ್ರಿ ಕಳಚೆ ಸೊಸೈಟಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಪ್ರಮುಖ ಉಮೇಶ್ ಭಾಗ್ವತ್ ಹೇಳಿದರು.

ಅವರು ಪಟ್ಟಣದ ಎಪಿಎಂಸಿ ಆವಾರದಲ್ಲಿರುವ ಟಿಎಂಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ತಾಲೂಕಿನಲ್ಲಿ ಇರುವ ಮಳೆ ಮಾಪನ ಯಂತ್ರಗಳು ನಿರ್ವಹಣೆ ಆಗದೆ ಬೆಳೆ ವಿಮೆ ತಾಲ್ಲೂಕಿನ ರೈತರ ಪಾಲಿಗೆ ಇಲ್ಲವೆಂಬ ಪರಿಸ್ಥಿತಿ ತಲುಪಿತ್ತು ಈ ಸಂದರ್ಭದಲ್ಲಿ ಸಂಸದರಲ್ಲಿ ಮತ್ತು ಶಾಸಕರಲ್ಲಿ ಸಮಸ್ಯೆ ಬಿನ್ನವಿಸಿಕೊಂಡಿದ್ದೆವು ಅದರ ಫಲವಾಗಿ ಸಂಸದ ಕಾಗೇರಿಯವರು ಮುತುವರ್ಜಿ ವಹಿಸಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬಳಿ ಪಟ್ಟು ಹಿಡಿದು ಕ್ಷೇಮ ವಿಮಾ ಸಂಸ್ಥೆ ಗೆ ಮಾಹಿತಿ ನೀಡಿ ರೈತರಿಗೆ ಬೆಳೆ ವಿಮೆ ತಲುಪುವಂತೆ ಮಾಡಿದ್ದಾರೆ ಅವರ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಟಿ.ಎಂ.ಎಸ್ ಅಧ್ಯಕ್ಷ ನಾರಾಯಣ್ ಭಟ್ ಅಗ್ಗಾಶಿ ಕುಂಬ್ರಿ , ಎಲ್.ಎಸ್.ಎಂ.ಪಿ.ಅಧ್ಯಕ್ಷ ನಾಗರಾಜ್ ಕವಡಿಕೆರೆ ,ಮಲವಳ್ಳಿ ಸೊಸೈಟಿ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಇಡಗುಂದಿ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘು ಭಟ್ ಹೇಳಿದರು.

ಈ ಸಂದರ್ಭದಲ್ಲಿ ಯುಕೆ ಬ್ಯಾಂಕ್ ನಿರ್ದೇಶಕ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ರೈತಮೋರ್ಚಾ ಪ್ರಮುಖ ರಾಮಚಂದ್ರ ಚಿಕ್ಯಾನಮನೆ , ಕೃಷಿಕ ಸಮಾಜದ ಪ್ರಮುಖ ವಿ.ಎನ್.ಭಟ್ ಇತರ ಪ್ರಮುಖರು ಉಪಸ್ಥಿತರಿದ್ದರು.






