Breaking News

ಮರೆತಿದ್ದ ಬೆಳೆ ವಿಮೆ ಮರಳಿ ಪಡೆದ ಸಂತಸ – ಶ್ರಮಿಸಿದ ಸಂಸದ ಶಾಸಕರಿಗೆ ಧನ್ಯವಾದಗಳು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಕಳೆದ ಸಾಲಿನ ಹವಮಾನ ಆಧಾರಿತ ಬೆಳೆ ವಿಮೆ ತಾಂತ್ರಿಕ ಕಾರಣಗಳಿಂದಾಗಿ ರೈತರ ಕೈ ಸೇರದೆ ಗಗನ ಕುಸುಮವಾಗಿತ್ತು. ಬೆಳೆ ವಿಮೆ ಪಡೆಯುವುದು ಕನಸಿನ ಮಾತು ಎನ್ನುವಷ್ಟರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ದ ಫಲ ಮತ್ತು ಶಾಸಕ ಶಿವರಾಮ ಹೆಬ್ಬಾರ್ ಅವರ ಮುತುವರ್ಜಿ ಮರೆತೆ ಹೋಗಿದ್ದ ಬೆಳೆ ವಿಮೆ ಪಡೆದಂತಾಗಿದೆ. ಇಂತಹ ಸಾರ್ಥಕ ಕಾರ್ಯಕ್ಕೆ ರೈತರು,ಸಹಕಾರಿ ಸಂಘ ಸಂಸ್ಥೆಗಳು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸಹ್ಯಾದ್ರಿ ಕಳಚೆ ಸೊಸೈಟಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಪ್ರಮುಖ ಉಮೇಶ್ ಭಾಗ್ವತ್ ಹೇಳಿದರು.


ಅವರು ಪಟ್ಟಣದ ಎಪಿಎಂಸಿ ಆವಾರದಲ್ಲಿರುವ ಟಿಎಂಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.


ತಾಲೂಕಿನಲ್ಲಿ ಇರುವ ಮಳೆ ಮಾಪನ ಯಂತ್ರಗಳು ನಿರ್ವಹಣೆ ಆಗದೆ ಬೆಳೆ ವಿಮೆ ತಾಲ್ಲೂಕಿನ ರೈತರ ಪಾಲಿಗೆ ಇಲ್ಲವೆಂಬ ಪರಿಸ್ಥಿತಿ ತಲುಪಿತ್ತು ಈ ಸಂದರ್ಭದಲ್ಲಿ ಸಂಸದರಲ್ಲಿ ಮತ್ತು ಶಾಸಕರಲ್ಲಿ ಸಮಸ್ಯೆ ಬಿನ್ನವಿಸಿಕೊಂಡಿದ್ದೆವು ಅದರ ಫಲವಾಗಿ ಸಂಸದ ಕಾಗೇರಿಯವರು ಮುತುವರ್ಜಿ ವಹಿಸಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬಳಿ ಪಟ್ಟು ಹಿಡಿದು ಕ್ಷೇಮ ವಿಮಾ ಸಂಸ್ಥೆ ಗೆ ಮಾಹಿತಿ ನೀಡಿ ರೈತರಿಗೆ ಬೆಳೆ ವಿಮೆ ತಲುಪುವಂತೆ ಮಾಡಿದ್ದಾರೆ ಅವರ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಟಿ.ಎಂ.ಎಸ್ ಅಧ್ಯಕ್ಷ ನಾರಾಯಣ್ ಭಟ್ ಅಗ್ಗಾಶಿ ಕುಂಬ್ರಿ , ಎಲ್.ಎಸ್.ಎಂ.ಪಿ.ಅಧ್ಯಕ್ಷ ನಾಗರಾಜ್ ಕವಡಿಕೆರೆ ,ಮಲವಳ್ಳಿ ಸೊಸೈಟಿ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಇಡಗುಂದಿ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘು ಭಟ್ ಹೇಳಿದರು.


ಈ ಸಂದರ್ಭದಲ್ಲಿ ಯುಕೆ ಬ್ಯಾಂಕ್ ನಿರ್ದೇಶಕ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ರೈತಮೋರ್ಚಾ ಪ್ರಮುಖ ರಾಮಚಂದ್ರ ಚಿಕ್ಯಾನಮನೆ , ಕೃಷಿಕ ಸಮಾಜದ ಪ್ರಮುಖ ವಿ.ಎನ್.ಭಟ್ ಇತರ ಪ್ರಮುಖರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *