
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆಯಾಗಿದ್ದು ರಾಜ್ಯ ನಾಯಕರು ಜಿಲ್ಲಾ ವರಿಷ್ಟರು ಹಾಗು ತಾಲ್ಲೂಕಿನ ಹಿರಿಯ ಕಾಂಗ್ರೆಸ್ಸಿಗರ ಸಲಹೆ ಸೂಚನೆ ಪಡೆದು ವಿಶೇಷವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಯುವ ನಾಯಕ ಕೆ.ಪಿ.ಸಿ.ಸಿ ಸದಸ್ಯ ವಿವೇಕ್ ಹೆಬ್ಬಾರ್ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ವಿಶ್ವಾಸದೊಂದಿಗೆ ಭವಿಷ್ಯದಲ್ಲಿ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವೆನು ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ವಿ.ಎಸ್.ಭಟ್ ಹೇಳಿದರು.

ಅವರು ಪ್ರತಿಧ್ವನಿ ಯೊಂದಿಗೆ ಮಾತನಾಡುತ್ತ ಪಕ್ಷದಲ್ಲಿ ಬಹು ಸಮಯದಿಂದಲು ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸುತ್ತಾ ಬಂದಿದ್ದು ಹಿರಿಯರ ಆಗ್ರಹದ ಮೇರೆಗೆ ಒಮ್ಮೆ ಇದೇ ಅಧ್ಯಕ್ಷಗಾಧಿಯನ್ನು ನಿಭಾಯಿಸಿದ ಅನುಭವ ಹೊಂದಿದ್ದೇನೆ. ಮುಂದೆಯು ಎಲ್ಲರ ವಿಶ್ವಾಸದೊಂದಿಗೆ ಶ್ರಮಿಸಿ ಪಕ್ಷಸಂಘಟನೆಯಲ್ಲಿ ಸಕ್ರಿಯನಾಗಲಿದ್ದೇನೆ.

ರಾಜ್ಯದಲ್ಲಿಜನಪ್ರಿಯ ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಜನಮಾನಸದಲ್ಲಿ ಉನ್ನತ ಸ್ಥಾನದಲಿದ್ದು ಪ್ರತಿ ಮನೆಯಲ್ಲು ಪಕ್ಷದ ಪರವಾದ ಒಲವಿದೆ ಅದೇರೀತಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಬೇರು ಮಟ್ಟದಿಂದಲು ಗಟ್ಟಿಯಾಗಿದ್ದು ವಿವೇಕ್ ಹೆಬ್ಬಾರ್ ಅವರು ಬೂತ್ ಮಟ್ಟದಲ್ಲಿ ಸಂಚಾರ ಆರಂಭಿಸಿ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ ಅದನ್ನೆ ಮುಂದುವರೆಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದೇನೆ.

ನನ್ನ ಮೇಲಿನ ನಂಬಿಕೆ ಹುಸಿಗೊಳಿಸದೆ ಅಧಕ್ಷ ಸ್ಥಾನದ ಜವಾಬ್ದಾರಿ ಕೊಟ್ಟ ಸರ್ವರಿಗು ವಿಶೇಷವಾಗಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಮಾಜಿ ಶಾಸಕರು ಹಾಗು ಕೆಪಿಸಿಸಿ ಸದಸ್ಯರು ವಿ.ಎಸ್. ಪಾಟೀಲ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಾಯಿನಾಥ್ ಗಾಂವ್ಕರ್ , ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎನ್.ಕೆ.ಭಟ್ ಮೆಣಸುಪಾಲ್ ಹಾಗು ತಾಲ್ಲೂಕಿನ ಹಿರಿಯ ಕಾಂಗ್ರೆಸ್ಸಿಗರಿಗೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ವಿ.ಎಸ್.ಭಟ್ ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ





