

ಪ್ರತಿಧ್ವನಿ ಯಲ್ಲಾಪುರ : ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕದಿಂದ ಪಟ್ಟಣದ ರವಿವಾರದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿರುವ ಎಲ್ಲಾ ಅಂಗಡಿಗಳ ಪರಿಶೀಲನೆ ನಡೆಯಿತು. ಅಪ್ರಾಪ್ತ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ಪೋಷಕರ ಒತ್ತಡದಿಂದ ಹಣದ ಆಮಿಷದಿಂದ ಮತ್ತಾವುದೇ ಅವಸರದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವರ ತಪಾಸಣೆ ನಡೆಯಿತು.
ವಿದ್ಯೆಯಿಂದ ವಂಚಿತರಾಗಿ ಶಾಲೆ ಬಿಟ್ಟು ಅಂಗಡಿಗಳ ಕೆಲಸದಲ್ಲಿ ತೊಡಗಿಕೊಂಡಿರುವ ಅಪ್ರಾಪ್ತ ವಯಸ್ಸಿನ ಮಕ್ಕಳ ಕುರಿತು ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕದ ಅಧಿಕಾರಿಗಳಾದ ಮಹೇಶ್, ಯಾಲ್ಸಿ ಅವರೊಂದಿಗೆ ತಾಲೂಕು ಅಧಿಕಾರಿ ವೀರವ್ವ , ಶಿಕ್ಷಣ ಇಲಾಖೆಯ ಅಧಿಕಾರಿ ಷಣ್ಮುಖ ಹೆಗಡೆ, ಪೊಲೀಸ್ ಸಿಬ್ಬಂದಿಗಳಾದ ಸಕ್ಕಿ ಪಾಟೀಲ, ಸುರೇಶ್ ಕಂಟ್ರಾö್ಯಕ್ಟರ್ ಪ್ರತಿ ಅಂಗಡಿಗಳಿಗೆ ಭೇಟಿ ನೀಡಿ ಅಂತಹ ಮಕ್ಕಳು ಕಂಡು ಬಂದಲ್ಲಿ ಸಂಬಂಧಿಸಿದ ಅಂಗಡಿ ಮಾಲೀಕರಿಗೆ ಪ್ರಥಮ ಎಚ್ಛರಿಕೆ ನೀಡಿ ಮುಂದೆ ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿದ್ದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಛರಿಸಿದರು.

ಪ್ರತಿ ತಾಲೂಕು ಮಟ್ಟದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ ಯಲ್ಲಾಪುರದಲ್ಲಿ ಭಿಕ್ಷಾಟನೆಯಲ್ಲಿ ಯಾರೂ ತೊಡಗಿಕೊಂಡಿರದ ಕಾರಣ ಸಂತೆ ವ್ಯಾಪಾರ ವಹಿವಾಟಿನಲ್ಲಿ ಅಂತಹ ಮಕ್ಕಳೇನಾದರೂ ಕಂಡುಬAದಲ್ಲಿ ಸಂಬAಧಿಸಿದವರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಮುಂದೆ ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸುತ್ತಿರುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಛರಿಕೆ ನೀಡಲಾಗಿದೆ.- ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕದ ಅಧಿಕಾರಿಗಳು
Prathidvani Yellapura