
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಮನುಷ್ಯ ಅತ್ಯಂತ ಭಾವಜೀವಿ ಆತನ ಭಾವನೆಗಳಿಗೆ ಸ್ಪಂದಿಸುವಂತೆ ಪ್ರತಿ ಅಕ್ಷರಗಳನ್ನು ಜೋಡಿಸಿ ಪದಗುಚ್ಚವಾಗಿಸಿ ಭಾವಗೀತೆಗಳನ್ನು ನಾಡಿಗೆ ನೀಡಿದ ಮಹಾನ್ ಚೇತನ ಹೆಚ್.ಎಸ್.ವೆಂಕಟೇಶಮೂರ್ತಿ ಗಳು ಅಜರಾಮರ ಅವರ ಗೀತೆಗಳು ಸದಾ ಅಮರ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಹೇಳಿದರು.

ಅವರು ಪಟ್ಟಣದ ಕೋಟ್೯ ಹಿಂಬಾಗದ ಶಿವ-ಶಂಕರ ನಿಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡ ದಿವಂಗತ ಡಾ, ಹೆಚ್.ಎಸ್.ವೆಂಕಟೇಶ ಮೂರ್ತಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾವಕವಿ ಹೆಚ್.ಎಸ್.ವಿ ಆವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರದ್ದೆ ರಚನೆಯ ಗೀತೆಗಳನ್ನು ಹಾಡಲಾಯಿತು ಅವರ ಜೀವನ ವೃತ್ತಾಂತ ಮತ್ತು ಲೇಖನದ ಕುರಿತು ವಿವಿಧ ಬರಹಗಾರರು ಕವಿಗಳು ಮಾತನಾಡುದರು.
ಉಪಸ್ಥಿತಿ : ಡಾ,ಸೌಮ್ಯ ಭಟ್, ಮುಕ್ತಾ ಶಂಕರ್, ಶ್ರೀರಂಗ ಕಟ್ಟಿ, ಸುಭ್ರಾಯ ಬಿದ್ರೇಮನೆ, ಸತೀಶ್ ಶೆಟ್ಟಿ, ರೂಪಾ ಶೆಟ್ಟಿ, ಯಮುನಾ, ನಾಗೇಶ್ ಯಲ್ಲಾಪುರಕರ, ಸುಧಾಕರನಾಯ್ಕ್, ಗಣಪತಿ ಕಂಚಿಪಾಲ್, ಸೀತಾಭಟ್, ತ್ರಿಷಾ ಇನ್ನಿತರರು.

ನುಡಿನಮನ ಕಾರ್ಯಕ್ರಮ ಪುಷ್ಪನಮನದೊಂದಿಗೆ ಪ್ರಾರಂಭ, ವಿಶೇಷ ಉಪಸ್ಥಿತಿ ಪ್ರಮೋದ್ ಹೆಗಡೆ,ಅಧ್ಯಕ್ಷತೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲ ಹುಣಸಗಿ, ಆಯೋಜನೆ ಶಂಕರ ನಾಯಕ್, ನಿರೂಪಣೆ ಕೇಬಲ್ ನಾಗೇಶ್.
