Breaking News

ಯಲ್ಲಾಪುರದಲ್ಲಿ ಬಣ್ಣಬಣ್ಣದ ಹೂ ಗಿಡಗಳ ಭರ್ಜರಿ ಮಾರಾಟ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆ ಯಲ್ಲಿ ಬಣ್ಣದ ಹೂಗಿಡಗಳ ರಾಶಿ ಅಲಂಕಾರಿಕ ಸಸ್ಯಗಳ ಮಾರಾಟ ಬಲುಜೋರಾಗಿ ಸಾಗಿದೆ.
ಪ್ರತಿ ವರ್ಷ ಹೂಗಿಡ ತಂದು ಒಂದು ಅಥವ ಎರಡು ತಿಂಗಳ ಕಾಲ ವ್ಯಾಪರ ಮಾಡಿ ಮುಂದೆ ಸಾಗುವ ಅದೇ ವ್ಯಾಪಾರಸ್ಥರು ಪಟ್ಟಣಕ್ಕೆ ಬಂದಿದ್ದು ಅಂಚೆ ಇಲಾಖೆಯ ಮುಂಬಾಗದಲ್ಲಿ ಹೂ ಗಿಡಗಳು ಮತ್ತು ಅಲಂಕಾರಿಕ ಸಸ್ಯಗಳ ರಾಶಿ ಹಾಕಿ ಮಾರಟ ಮಾಡಲಾಗುತ್ತಿದೆ.


ವಿವಿಧ ಬಣ್ಣದ ಹಾಗು ಜಾತಿಯ ಗುಲಾಬಿ ನೋಡುಗರ ಕಣ್ಮನ ತಣಿಸಿದರೆ ಸೇವಂತಿ ಚೆಂಡು ಹೂ ರಾಶಿ ಹೂಗಿಡಗಳ ಮದ್ಯ ರಾರಾಜಿಸುತ್ತಿದೆ ಇನ್ನು ಅಲಂಕಾರಿಕ ಗಿಡಗಳು ಒಂದಕ್ಕಿಂತ ಒಂದು ಜನರನ್ನು ಆಕರ್ಶಿಸುತ್ತಿವೆ.


ಕ್ರಿಸ್ ಮಸ್ ಟ್ರೀ, ಬೊನ್ಸಾಯ ವಿಶೇಷವಾಗಿವೆ 50 ರಿಂದ ಪ್ರಾರಂಭವಾಗಿ 1 ಸಾವಿರ ಬೆಲೆಯ ಗಿಡಗಳು ಲಭ್ಯವಿದೆ. ಮಳೆ ಬೀಳುವ ಪ್ರಮಾಣ ಕಡಿಮೆ ಇರುವುದರಿಂದ ಜನರ ಓಡಾಟವಿದ್ದು ವ್ಯಾಪಾರ ಬಲುಜೋರಾಗಿ ಸಾಗಿದೆ.


ಮಹಾರಾಷ್ಟ್ರದ ಪುಣೆಯಿಂದ ಬಂದಿರುವ ತಂಡ ಯಲ್ಲಾಪುರ ಮಾತ್ರವಲ್ಲದೆ ಶಿರಸಿ, ಸಿದ್ದಾಪುರ, ಬನವಾಸಿ, ಅಂಕೋಲಾ, ಕುಟುಟಗಳಲ್ಲು ಇವರ ತಂಡ ವ್ಯಾಪಾರಕ್ಕಿಳಿಯುತ್ತಾರೆ.

ಪ್ರತಿವರ್ಷ ಎರಡು ತಿಂಗಳ ಕಾಲ ಯಲ್ಲಾಪುರದಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಹೂ ಗಿಡಗಳ ವ್ಯಾಪಾರ ಮಾಡುತ್ತೇವೆ. ಒಂದೊಂದು ಕಡೆ ಇಬ್ಬರು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತೇವೆ. ಒಂದುವೇಳೆ ಹೆಚ್ಚು ಗಿಡಗಳು ಖಾಲಿಯಾದರೆ ಮತ್ತೆ ಪುನಾದಿಂದ ತರಿಸಲಾಗುತ್ಯದೆ. ಸದ್ಯ ವ್ಯಾಪಾರ ಪ್ರಾರಂಬಿಸಿದ್ದು ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲದ್ದೇವೆ. ರವಿವಾರ ಸಂತೆಯ ದಿನವಾಗಿದ್ದು ಹೆಚ್ಚಿನ ಜನರು ಆಗಮಿಸಿ ಗಿಡ ಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ.
ಮನೋಜ್
ಹೂಗಿಡಗಳ ವ್ಯಾಪಾರಿ ಪೂನಾ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *