
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ಡಕಾಯಿತಿ ಮಾಡಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ವರ್ಷದ ನಂತರ ಪ್ರಕರಣದ ಆರೋಪಿಗಳನ್ನು ಕಂಬಿ ಹಿಂದೆ ಕಳಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ 23-5-2024 ರಂದು ಮುಂಬಯಿ ನಿಂದ ಮಂಗಳೂರಿಗೆ ರಾಜಸ್ಥಾನ ಮೂಲದ ಸುರೇಶ್ ರಾವ್ ಮತ್ತು ಸಂಪತ್ ಸೋಲಂಕಿ ಎಂಬುವರು ತೆರಳುವ ವೇಳೆ ಅರಬೈಲ್ ಘಟ್ಟದಲ್ಲಿ ಅಡ್ಡಗಟ್ಟಿದ ಡರೋಡೆಕೋರರ ತಂಡ ಕಾರಿನಲಿದ್ದವರನ್ನು ಹೆದರಿಸಿ ಬೆದರಿಸಿ ಹೊಡೆದು ಅವರ ಬಳಿಯಲಿದ್ದ ಮೊಬೈಲ್ ಫೋನ್ ಮತ್ತು ನಗದನ್ನು ಕಸಿದು ಕಾರ್ ಕೀ ಸಹಿತ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ನಡಯರಸ್ತೆಯಲ್ಲಿ ಇಳಿಸಿ ಪರಾರಿಯಾಗಿರುತ್ತಾರೆ.

ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ತನಿಖೆಯ ಪ್ರಾರಂಭದಲ್ಲಿ ಐವರನ್ನು ಬಂಧಿಸಲಾಗಿತ್ತು.

ಪ್ರಕರಣವನ್ನು ಅಲ್ಲಿಗೆ ಬಿಡದೆ ಮತ್ತೆ ಬೆನ್ನು ಹತ್ತಿದ್ದ ಯಲ್ಲಾಪುರ ಪೊಲೀಸರ ಶ್ರಮ ವರ್ಷದ ನಂತರ ಸಾರ್ಥಕವಾಗಿ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಖಂಡಾಲದ ಅಬ್ದುಲ್ ಮೆಹಬೂಬ್ ಶೇಖ್ ಮತ್ತು ಮಹಾರಾಷ್ಟ್ರದ ನಿವಾಸಿ ಸಂಕೇತ ಸುನಿಲ ತುಳಸನಕರ ಎಂಬ ಇಬ್ಬರು ಡಕಾಯಿತರನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ವಾಹನಗಳನ್ನು ಮತ್ತು ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಎಂ ನಾರಾಯಣ್ ಆಧಿಯಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸರ ಶ್ರಮದಲ್ಲಿ ಯಶಸ್ವಿಯಾಗಿದ್ದು ಸರ್ವರು ಅಭಿನಂದಿಸಿದ್ದಾರೆ.

