


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟೆ ಮತ್ತು ಮಂದಿರ ಲೋಕಾರ್ಪಣೆ ಕಾರ್ಯಕ್ಕೆ ಯಲ್ಲಾಪುರ ತಾಲೂಕಿನಾದ್ಯಂತ ಪೂಜಾ ಪುರಸ್ಕಾರಗಳು ವಿಜ್ರಂಭಣೆಯಿಂದ ಜರುಗಿದ್ದವು ಅದರಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದಯಾಕಾರಂತ್ ಅವರ ನೇತೃತ್ವದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಶ್ರೀರಾಮೋತ್ಸವ ಆಚರಿಸಲಾಗಿತ್ತು.

ಆಚರಣೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಂಗಡಿಕಾರರು,ಸಾರ್ವಜನಿಕರು,ಸ್ಥಳೀಯ ನಿವಾಸಿಗಳು ಹಾಗು ಹಿತೈಷಿಗಳು ನೀಡಿದ ದೇಣಿಗೆ ಹಣ ಉಳಿಕೆಯಾಗಿದ್ದು 21 ಸಾವಿರ ನಗದು ಕಾಣಿಕೆ ಗ್ರಾಮದೇವಿ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಯಿತು.

ಮಂಜುನಾಥ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗರ್ಭ ಗುಡಿಗೆ ಟೈಲ್ಸ್ ಜೋಡಣೆಗಾಗಿ ದಯಾಕಾರಂತ್ ನೇತೃತ್ವದಲ್ಲಿ ಸಂಘಟನೆಯ ಇತರರು ಸೇರಿ 21 ಸಾವಿರ ನಗದು ಕಾಣಿಕೆ ದೇಣಿಗೆ ರೂಪದಲ್ಲಿ ನೀಡಲಾಯಿತು. ಧಾರ್ಮಿಕ ಕಾರ್ಯಕ್ಕಾಗಿ ಸಾರ್ವಜನಿಕರು ನೀಡಿದ ದೇಣಿಗೆ ಹಣ ವೃಥಾ ಎಲ್ಲಿಯು ಪೋಲಾಗದೆ ದೈವ ಕಾರ್ಯಕ್ಕೆ ನೀಡಿದ್ದು ಸಾರ್ಥಕತೆ ತೋರಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.



Prathidvani Yellapura