

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ£ ಎನ್.ಎಸ್.ಎಸ್, ಸ್ಕೌಟ್ ಅಂಡ್ ಗೈಡ್ಸ್ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಪರಿಸರ ಅರಿವು ಕುರಿತ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೆಯೇ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಪಕ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೂಡ ಈ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಿ.ಎಸ್ ಭಟ್ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮಧಿಕಾರಿ ಡಿ.ಜಿ ತಾಪಸ್ ಹಾಗೂ ಶ್ರೀರಾಮಕೃಷ್ಣ ಗೌಡ, ರೇಂಜರ್ ಲೀಡರ್ ಕು. ಭವ್ಯ ಸಿ. ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಎನ್.ಬಿ ಮೆಣಸುಮನೆ , ದೈಹಿಕ ಶಿಕ್ಷಕಿ ಅಕ್ಕುಬಾಯಿ .ಎಲ್. ದರಗದ, ಎನ್.ಎಸ್.ಎಸ್ ನಾಯಕಿಯರಾದ ಕು.ದಿವ್ಯ ನಾಯಕ್, ಕು.ಸ್ನೇಹ ಆಚಾರಿ, ನಾಯಕರಾದ ಕು.ದೀಪಕ್ ಕುಂಕಿ ಕು.ಭವಾನಿ ಶಂಕರ್ ಹಾಗೂ ಸ್ಕೌಟ್ಸ್ & ಗೈಡ್ಸ್ ಪ್ರಸಾದ್ ಭಟ್, ವಿನಯ್ ಕರಮನೆ , ಗಣೇಶ್ ಗಾಳಪ್ಪನವರ್, ಜಯಂತ್ ಗೋಸಂಗಿ, ಅಂಜಲಿ, ವೀಣಾ ಭಟ್, ವಾಣಿ ಎಂಎಸ್ , ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಕು. ಗಣೇಶ್ ಶೆಟ್ಟಿ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು





Prathidvani Yellapura