


ಪ್ರತಿಧ್ವನಿ ಯಲ್ಲಾಪುರ : ಸನಾತನ ಹಿಂದೂ ಧರ್ಮದ ಕುರಿತು ತುಚ್ಛ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿ ತಕ್ಷಣ ಬಂಧಿಸುವAತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ತಿನ ಯಲ್ಲಾಪುರ ಘಟಕದ ವತಿಯಿಂದ ತಮಿಳುನಾಡಿನ ರಾಜ್ಯಪಾಲರು, ಮುಖ್ಯಂತ್ರಿಗಳು ಹಾಗೂ ದೇಶದ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಸನಾತನ ಹಿಂದೂ ಧರ್ಮವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ತಮಿಳುನಾಡು ಸಚಿವ ಉದಯರವಿ ಸ್ಟಾಲಿನ್ ಡೆಂಗ್ಯೂ, ಮಲೇರಿಯಾ, ಕೊರೊನಾದಂತಹ ಮಾರಣಾಂತಿಕ ರೋಗಗಳಿಗೆ ಹೋಲಿಸಿ ಹಿಂದೂ ಧರ್ಮವನ್ನು ಬುಡಸಹಿತ ನಿರ್ಮೂಲನೆ ಮಾಡಬೇಕೆಂದು ಸಾರ್ವಜನಿಕವಾಗಿ ಭಾಷಣ ಮಾಡುವ ಮೂಲಕ ಅಧಿಕಾರ ಗೌಪ್ಯತೆಯ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ.
ತಮಿಳುನಾಡಷ್ಟೇ ಅಲ್ಲದೇ ಇಡೀ ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ.
ಆದ್ದರಿಂದ ಉದಯರವಿ ಸ್ಟಾಲಿನ್ ಅವರನ್ನು ತಮಿಳುನಾಡು ಸರ್ಕಾರದ ಸಚಿವ ಸ್ಥಾನದಿಂದ ಕಿತ್ತೊಗೆದು ಸಮಾಜದ ಸ್ವಾಸ್ಥö್ಯ ಕೆಡಿಸುತ್ತಿರುವ ಅವರನ್ನು ಜೈಲಿಗೆ ಅಟ್ಟಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪರಿಷತ್ನ ಪ್ರಮುಖರಾದ ರಾಮು ನಾಯ್ಕ, ನಾರಾಯಣ ನಾಯಕ, ಜಿ.ಎನ್ ಗಾಂವ್ಕರ, ಸೋಮೇಶ್ವರ ನಾಯ್ಕ, ವಿನೋದ ತಳೇಕರ, ಅನಂತ ಸುಬ್ರಾಯ ಗಾಂವ್ಕರ, ಮಹೇಶ ನಾಯ್ಕ, ಹರೀಶ್ ಎಂ ಭೋವಿವಡ್ಡರ ಉಪಸ್ಥಿತರಿದ್ದರು.








Prathidvani Yellapura