

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡೋಮಗೇರಿ ಗ್ರಾಮದಲ್ಲಿ ಮನೆಯೊಂದರಲ್ಲಿ ಬಂಗಾರದ ಒಡವೆ, ನಗದು ಸೇರಿದಂತೆ 1 ಲಕ್ಷದ 4೦ಸಾವಿರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ಮೇ 24 ರಂದು ಪ್ರಕರಣ ದಾಖಲಾಗಿತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು 8 ದಿನದ ಕಾರ್ಯಾಚರಣೆಯಲ್ಲಿ ಕಳ್ಳನನ್ನು ಬಂಧಿಸಿ 1,4೦,೦೦೦ ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಯನ್ನಾಧರಿಸಿ ಬೆಳಗಾವಿಯ ಖಾನಾಪುರದ ಗಂದಿಗೆವಾಡಾ ಗ್ರಾಮದ ನಿವಾಸಿ ಬಸವರಾಜ ರುದ್ರಪ್ಪ ಅಂಬಡಗಟ್ಟಿ @ ಬೆಂಕಿ ಬಸು ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಆರೋಪಿಯು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ. ಆರೋಪಿಯಿಂದ ಕಳ್ಳತನ ಮಾಡಿದ 1,4೦,೦೦೦ ರೂ ಮೌಲ್ಯದ 4೦ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷಿ ಕಾಯಕ ಮಾಡುವ ಡೋಮಗೇರಿ ನಿವಾಸಿ ಪ್ರದೀಪ ದಿವಾಕರ ಹೆಗಡೆ ಎಂಬುವರ ವಾಸದ ಮನೆಯಲ್ಲಿ ಮೇ 24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹೆಂಚನ್ನು ತೆಗೆದು ಒಳನುಸುಳಿ ಕಪಾಟಿನ ಬಾಗಿಲು ಮುರಿದು 15 ಗ್ರಾಂ ಬಂಗಾರದ ಚೈನ್, 20 ಗ್ರಾಂ ಎರಡು ಬಂಗಾರದ ಬಳೆ, 5 ಗ್ರಾಂನ ಒಂದು ಉಂಗುರ ಹಾಗೂ 8000 ರೂ ನಗದು ಸೇರಿದಂತೆ 1 ಲಕ್ಷದ 40 ಸಾವಿರ ಮೌಲ್ಯದ ಸ್ವತ್ತನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಹಾಗೂ ಶಿರಸಿಯ ಪೊಲೀಸ್ ಉಪಾಧೀಕ್ಷಕ ಗಣೇಶ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ ಪಿಎಸ್ಐಗಳಾದ ರವಿ ಗುಡ್ಡಿ, ಲತಾ ಕೆ.ಎನ್,ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ್ ಶಫಿ, ಗಜಾನನ, ಗಿರೀಶ್ ಲಮಾಣಿ, ಪರಶುರಾಮ, ಕಾಳೆ, ಪ್ರವೀಣ, ಚೆನ್ನಕೇಶವ ಇವರುಗಳು ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.






Prathidvani Yellapura