
ಯಲ್ಲಾಪುರ : ದೇಶ ಕಾಯುತ್ತಿರುವ ಸೈನಿಕರು ದೇಶಕ್ಕೆ ಅನ್ನ ನೀಡುವ ಅನ್ನದಾತರಾದ ರೈತರು ದೇಶದ ಅಭಿವೃದ್ಧಿಗೆ ಬಹು ದೊಡ್ಡ ಆಸ್ತಿಯಾಗಿದ್ದಾರೆ. ಅಂತಹ ಅನ್ನದಾತರ ಬಾಳು ಬೆಳಗಲು ಗೋವುಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹೈನುಗಾರಿಕೆ ಅಭಿವೃದ್ಧಿಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ ಹಾಗು ಜಿಲ್ಲೆಯಲ್ಲಿಯೆ ಹೈಟೆಕ್ ಸುಸಜ್ಜಿತ ಪಾಲಿ ಕ್ಲೀನಿಕ್ ಯಲ್ಲಾಪುರದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಪಶುವೈದ್ಯ ಆಸ್ಪತ್ರೆ ಆವಾರದಲ್ಲಿ ತಾಲೂಕಿನಲ್ಲಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಆಸ್ಪತ್ರೆ ಆವಾರದಲ್ಲಿ ಗೋವಿಗೆ ಪೂಜಿಸಿ ಕಾರ್ಯಕ್ರಮ ಉದ್ಘಾಟಿಸಿದ್ದು ಅರ್ಥಪೂರ್ಣವಾಗಿತ್ತು.
ಹಾಲು ಕರೆಯುವ ಸ್ಪರ್ಧೆ, ಆರೋಗ್ಯಪೂರ್ಣ ಎತ್ತುಗಳ ಪಾಲನೆ ಪೋಷಣೆ ಹಾಗು ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಜಿ.ಪಂ ಮಾಜಿ ಸದಸ್ಯ ವಿಜಯ್ ಮಿರಾಶಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ನರ್ಮದಾ ನಾಯ್ಕ್, ಉಪಾಧ್ಯಕ್ಷ ಅಮಿತ್ ಅಂಗಡಿ, ಇಲಾಖೆ ಪ್ರಮುಖ ಉಮೇಶ್ ಪಂಡಿತ್,ರವಿಭಟ್ ಬರಗದ್ದೆ, ಇನ್ನಿತರರು ಉಪಸ್ಥಿತರಿದ್ದರು.
ಪಶು ವೈಧ್ಯಾಧಿಕಾರಿ ಸುಭ್ರಾಯ ಭಟ್ ಸ್ವಾಗತಿಸಿ ವಂದಿಸಿದರು ಶಿಕ್ಷಕ ಚಂದ್ರಹಾಸ ನಾಯ್ಕ್ ನಿರೂಪಿಸಿದರು.
Prathidvani Yellapura